ಮೃತ ಮಾಡ್ನೂರು ಗ್ರಾ.ಪಂ ಸದಸ್ಯ ಶಂಕರ್‌ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್‌ ರೈ

0

ಪುತ್ತೂರು: ಇತ್ತೀಚೆಗೆ ನಿಧನರಾದ ಕಾವು ಮಾಡ್ನೂರು ಗ್ರಾಪಂ ಸದಸ್ಯ, ಕಾಂಗ್ರೆಸ್ ಕಾರ್ಯಕರ್ತ ಶಂಕರ್ ಅವರ ಮನೆಗೆ ಭೇಟಿ ನೀಡಿದ ಶಾಸಕ ಅಶೋಕ್‌ ಕುಮಾರ್‌ ರೈ ಕುಟುಂಬಕ್ಕೆ ಸಾಂತ್ವನ ಹೇಳಿ ನೆರವಿನ ಹಸ್ತ ಚಾಚಿದರು.ಇದೇ ವೇಳೆ ಶಾಸಕರು ಮೃತ ಶಂಕರ್ ಅವರ ಪತ್ನಿಗೆ ಜೀವನೋಪಾಯಕ್ಕಾಗಿ ಉದ್ಯೋಗವೊಂದನ್ನು ಕೊಡಿಸುವ ಭರವಸೆಯನ್ನು ನೀಡಿದರು.ಬಳಿಕ ಶಾಸಕರು ಕಾವುನಲ್ಲಿ ನಡೆಯುತ್ತಿರುವ ಆದಿ ದ್ರಾವಿಡ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಆಟಗಾರರನ್ನು ಹುರಿದುಂಬಿಸಿದರು.

LEAVE A REPLY

Please enter your comment!
Please enter your name here