ಮನವಳಿಕೆ ಗುತ್ತು ಕುಸುಮ ಎನ್ ರೈ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲಂಕಾರು: ಪೆರಾಬೆ ಗ್ರಾಮದ ಮರುವಂತಿಲ ದಿ.ನಾರಾಯಣ ರೈ ಯವರ ಧರ್ಮಪತ್ನಿ ಮನವಳಿಕೆ ಗುತ್ತು ಕುಸುಮ ಎನ್ ರೈ ಯವರು ಆ.4ರಂದು ನಿಧನರಾಗಿದ್ದು, ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.
ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ .ಕೆಯವರು ನುಡಿನಮನ ಸಲ್ಲಿಸಿ ದಿ.ಕುಸುಮ ಎನ್ ರೈ ಯವರು ಪ್ರತಿಷ್ಟಿತ ಮನವಳಿಕೆಗುತ್ತಿನಲ್ಲಿ ಹುಟ್ಟಿ ಅದರ್ಶಪ್ರಾಯ ಜೀವನ ನಡೆಸಿದವರು. ಉತ್ತಮಕೃಷಿಕರಾಗಿ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಿ ಸಮಾಜದಲ್ಲಿ ಗೌರವ ಸ್ಥಾನವನ್ನು ಪಡೆಯುವಂತೆ ಪ್ರೇರಣೆ ನೀಡಿದವರು. ಮೃತರು 86 ವರ್ಷಗಳ ಕಾಲ ಜೀವನ ನಡೆಸಿ ಊರವರ ಪ್ರೀತಿ,ವಿಶ್ವಾಸಕ್ಕೆ ಭಾಜನರಾದವರು ಎಂದು ತಿಳಿಸಿ ಮೃತರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು.ನಂತರ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ವೇದಿಕೆಯಲ್ಲಿ ಮನವಳಿಕೆ ಗುತ್ತಿನ ಯಜಮಾನ ರಮಾನಾಥ ರೈ,ಬಂಟರಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಮಾಜಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಮೃತರ ಮಕ್ಕಳಾದ ರಾಧಾಕೃಷ್ಣ ರೈ,ಪ್ರಶಾಂತ್ ರೈ, ಸುಭಾನು ರೈ,ಸುದೀರ್ ರೈ, ಸವಿತಾ ಜಿ.ಅಡ್ಯಂತ್ತಾಯ,ಪ್ರಕಾಶಿನಿ ಶೆಟ್ಟಿ, ಅಳಿಯ ಗೋಪಾಲಕೃಷ್ಣ ಅಡ್ಯಂತ್ತಾಯ, ಸೊಸೆಯಂದಿರಾದ ನವೀನ ಆರ್ ರೈ,ನಂದಿನಿ ಪಿ ರೈ ಆಶಾ ಎಸ್ ರೈ, ಗೀತಾ ಎಸ್ ರೈ ,ಮೊಮ್ಮಕ್ಕಳು,ಮರಿಮೊಮ್ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮಾನಾಥ ಶೆಟ್ಟಿ, ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ.ಟಿ ಶೆಟ್ಟಿ, ಸೇರಿದಂತೆ ಮನವಳಿಕೆಗುತ್ತಿನ ಕುಟುಂಬಸ್ಥರುಹಾಗು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here