ಎಸ್‌ಕೆಎಸ್‌ಬಿವಿ ಕೂರ್ನಡ್ಕ ರೇಂಜ್ ‘ತಂಬೀಹ್’ ರೇಂಜ್ ಮಟ್ಟದ ಅಭಿಯಾನಕ್ಕೆ ಮೊಟ್ಟೆತ್ತಡ್ಕದಲ್ಲಿ ಚಾಲನೆ

0

ಪುತ್ತೂರು: ಎಸ್‌ಕೆಎಸ್‌ಬಿವಿ ಹಿದಾಯತುಲ್ ಇಸ್ಲಾಂ ಮದ್ರಸ ಸಹಕಾರದೊಂದಿಗೆ ಎಸ್‌ಕೆಎಸ್‌ಬಿವಿ ಕೂರ್ನಡ್ಕ ರೇಂಜ್ ‘ತಂಬೀಹ್’ ರೇಂಜ್ ಮಟ್ಟದ ಅಭಿಯಾನದ ಉದ್ಘಾಟನಾ ಸಮಾರಂಭ ಮೊಟ್ಟೆತ್ತಡ್ಕದಲ್ಲಿ ರೇಂಜ್ ಎಸ್‌ಕೆಎಸ್‌ಬಿವಿ ಚೇರ್‌ಮೆನ್ ನಿಯಾಝ್ ದಾರಿಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸ್ಥಳೀಯ ಮದ್ರಸ ಮುಖ್ಯೋಪಾಧ್ಯಾಯ ಉಮರುಲ್ ಫಾರೂಕ್ ಫೈಝಿ ಪ್ರಾರ್ಥನೆ ನೆರವೇರಿಸಿದರು. ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಾಫಿ ದಾರಿಮಿ ಉದ್ಘಾಟಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಸ್ಲಮಿ ಹಾಗೂ ಮೇನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಅಬೂಬಕರ್ ಮುಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾಝ್ ಫೈಝಿ ಪಟ್ಟೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿಷಯ ಮಂಡಿಸಿದರು. ಸಂಗಮದಲ್ಲಿ ಸ್ಥಳೀಯ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಕೆ ಉಪಸ್ಥಿತರಿದ್ದರು.

ಎಸ್‌ಕೆಎಸ್‌ಬಿವಿ ರೇಂಜ್ ಕನ್ವೀನರ್ ಅಶ್ರಫ್ ರಹ್ಮಾನಿ ಸ್ವಾಗತಿಸಿದರು. ಮೊಟ್ಟೆತ್ತಡ್ಕ ಮದ್ರಸ ಅಧ್ಯಾಪಕ ಬಶೀರ್ ದಾರಿಮಿ ಕಳಂಜ ವಂದಿಸಿದರು. ಮೊಟ್ಟೆತ್ತಡ್ಕ ಎಸ್‌ಕೆಎಸ್‌ಬಿವಿ ವತಿಯಿಂದ ಸಿಹಿತಿಂಡಿ ಮತ್ತು ಪಾನೀಯ ವಿತರಿಸಲಾಯಿತು.

LEAVE A REPLY

Please enter your comment!
Please enter your name here