ಆರ್ಲಪದವು; ಸನ್ಮಿತ್ರ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಸಮಿತಿ ರಚನೆ

0

ಅಧ್ಯಕ್ಷರಾಗಿ ಮಧುಸೂದನ ಭರಣ್ಯ, ಕಾರ್ಯದರ್ಶಿಯಾಗಿ ಶಶಿಧರ ಪೂಜಾರಿ ನಡುಕಟ್ಟ

    ನಿಡ್ಪಳ್ಳಿ; ಸಮ್ಮಿತ್ರ ರಿಕ್ಷಾ ಚಾಲಕ ಮಾಲಕರ ಸಂಘ ಆರ್ಲಪದವು ಪಾಣಾಜೆ ಇದರ ನೂತನ ಅಧ್ಯಕ್ಷರಾಗಿ ಮಧುಸೂದನ ಭರಣ್ಯ ಕಾರ್ಯದರ್ಶಿಯಾಗಿ ಶಶಿಧರ ಪೂಜಾರಿ ನಡುಕಟ್ಟ ಇವರು ಆಯ್ಕೆಯಾದರು.

      ಗೌರವಾಧ್ಯಕ್ಷರಾಗಿ ಶಿವಪ್ಪ ನಾಯ್ಕ ಮುಂಡಿತಡ್ಕ, ಉಪಾಧ್ಯಕ್ಷರಾಗಿ ಜಮಾಲು ಕಲ್ಲಪದವು, ಜತೆ ಕಾರ್ಯದರ್ಶಿಯಾಗಿ ಜಗದೀಶ ರೈ ಕಡಮಾಜೆ, ಕೋಶಾಧಿಕಾರಿಯಾಗಿ ಜಾಣು ನಾಯ್ಕ ಭರಣ್ಯ ಇವರು ಆಯ್ಕೆಯಾದರು.

     ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಆ.31 ರಂದು ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.

LEAVE A REPLY

Please enter your comment!
Please enter your name here