ಶ್ರೀ ವಿಷ್ಣು ಇಲೆಕ್ಟ್ರಿಕಲ್ಸ್ ನ ನೂತನ ಕ್ರೇನ್ ಲೋಕಾರ್ಪಣೆ

0

ಪುತ್ತೂರು: ಇಲೆಕ್ಟ್ರಿಕಲ್ಸ್ ಕ್ಷೇತ್ರದಲ್ಲಿ ಸುಮಾರು 25 ವರ್ಷ ಸೇವೆ ಸಲ್ಲಿಸುತ್ತಾ ಬಂದಿರುವ ಸಂಪ್ಯ ನಿವಾಸಿ, ಬಿ.ಸುಧಾಕರ್ ಮಾಲಕತ್ವದ ಶ್ರೀ ವಿಷ್ಣು ಇಲೆಕ್ಟ್ರಿಕಲ್ಸ್ ನ ನೂತನ ಕ್ರೇನ್ ಇದರ ಲೋಕಾರ್ಪಣೆ ಕಾರ್ಯವು ಅ.11 ಆಯುಧ ಪೂಜೆ ದಿನದಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರ ಪೂಜಾವಿಧಾನಗಳಿಂದ ನೆರವೇರಿತು.

ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ಬೂಡಿಯಾರು ಪುರುಷೋತ್ತಮ ರೈಯವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿಯ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ನವೀನ್ ಕುಮಾರ್ ಬಿ.ಎಸ್, ರಮೇಶ್ ಇಂದರ್, ಪ್ರಶಾಂತ್ ಕುಮಾರ್, ಸುಕೇಶ್ ಶೆಟ್ಟಿ, ಉಮೇಶ್ ಐ, ಅಣ್ಣಪ್ಪ ಎಲ್, ಜೀವನ್ ಎಸ್.ಕೆ, ಬಸವರಾಜ್, ಶಿವಾನಂದ್, ಮಧುಕರ್, ನಾಗರಾಜ್,  ಸಾಮಾಜಿಕ ಕಾರ್ಯಕರ್ತ ಪ್ರೀತಂ ಡಿ’ಸೋಜ ಮಲಾರು, ವಿಘ್ನೇಶ್ ಕ್ರೇನ್ ಮಾಲಕ ತಿಲಕ್ ಕುಮಾರ್, ಶ್ರೀ ದೇವತಾ ಸಮಿತಿಯ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here