ಫೆ 7- 8 : ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ‌‌‌‌‌‌

0

ಪುತ್ತೂರು: ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಫೆ. 7 ಮತ್ತು 8 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತ್ರತ್ವದಲ್ಲಿ ಜರಗಲಿದೆ.

ಫೆ 7 ರಂದು ತಂತ್ರಿಗಳ ಆಗಮನವಾಗಲಿದ್ದು, ಬಳಿಕ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರುಗಳ ಪ್ರತಿಷ್ಠಾದಿನದ ಪೂಜೆ, ಪಲ್ಲ ಪೂಜೆ ಜರಗಲಿದೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, “ಸಹಕಾರ ರತ್ನ” ಸವಣೂರು ಕೆ.ಸೀತಾರಾಮ ರೈಯವರು‌ ಮಧ್ಯಾಹ್ನದ ಅನ್ನಸಂತರ್ಪಣೆಯ ಸೇವಾಕರ್ತರಾಗಿರುತ್ತಾರೆ.

ಸಂಜೆ ದೀಪಾರಾಧನೆ, ತಾಯಂಬಕ‌ಸೇವೆ, ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿಯ ಅನ್ನಸಂತರ್ಪಣೆಯು ಗ್ರಾಮಸ್ಥರು ಮತ್ತು ಪರವೂರ ದಾನಿಗಳ ಸಹಕಾರದಲ್ಲಿ ನಡೆಯಲಿದೆ.

ಫೆ 8 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ ಜರಗಲಿದೆ. ಸವಣೂರುಗುತ್ತು ಕುಟುಂಬಸ್ಥರು ಮಧ್ಯಾಹ್ನದ ಅನ್ನಸಂತರ್ಪಣೆಯ ಸೇವಾಕರ್ತರಾಗಿರುತ್ತಾರೆ. ರಾತ್ರಿ 8 ರಿಂದ ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ, ಅನ್ನಸಂತರ್ಪಣೆ ಜರಲಿದ್ದು, ಬೆಂಗಳೂರಿನ ಕವಿತಾ ವಿ. ಶೆಟ್ಟಿ ಮತ್ತು ದೇಷ್ನಾ ಶೆಟ್ಟಿ ರವರು ಅನ್ನದಾನದ ಸೇವಾಕರ್ತರಾಗಿರುತ್ತಾರೆ ಎಂದು ದೇವಾಲಯದ ಆಡಳಿತದಾರ ಸವಣೂರುಗುತ್ತು ಡಾ. ರತ್ನಾಕರ ಶೆಟ್ಟಿ ಮತ್ತು ಕುಟುಂಬದವರು , ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಕಾರ್ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ದೇವಾಲಯದ ಪ್ರಧಾನ‌ಅರ್ಚಕ ಗೋಪಾಲಕೃಷ್ಣ ಬಡಿಕಿಲ್ಲಾಯ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಸುಣ್ಣಾಜೆ ತಿಳಿಸಿದ್ದಾರೆ.

ಫೆ‌ : 6 ಊರ ಭಕ್ತಾದಿಗಳಿಂದ‌ ಹೊರೆಕಾಣಿಕೆ ಸರ್ಮಪಣೆ
ಫೆ. 6 ರಂದು ಬೆಳಿಗ್ಗೆ 10 ರಿಂದ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆಯು ಸವಣೂರು ಪುದುಬೆಟ್ಟು ಜಿನಮಂದಿರದ ವಠಾರದಿಂದ ಹೊರಟು‌ ಸವಣೂರು – ಪರಣೆ ಮಾರ್ಗವಾಗಿ‌ ದೇವಾಲಯಕ್ಕೆ ತಲುಪಲಿದೆ ಎಂದು‌ ದೇವಸ್ಥಾನದ ಆಡಳಿತ‌ ಸಮಿತಿ ತಿಳಿಸಿದೆ

LEAVE A REPLY

Please enter your comment!
Please enter your name here