ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾವೈಕ ಸಮಿತಿಯ ಸಭೆ

0

ಗುರುವಾಯನಕೆರೆ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಓಡಿಲ್ನಾಳ ಇದರ  ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಾಲು ಮಾಯ ದೇವಸ್ಥಾನದಿಂದ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಓಡಿಲ್ನಾಳ ಗ್ರಾಮದ ಮೈರಲ್ಕೆಗೆ ಕರೆತರುವ ದಿಗ್ವಿಜಯ ಯಾತ್ರೆಗೆ ಗುರುವಾಯನಕೆರೆ
ವಲಯದ ಭಾವೈಕ ಸಮಿತಿಯ ಸಭೆಯು ಗುರುವಾಯನಕೆರೆ ಶಾರದ ಮಂಟಪದಲ್ಲಿ ಸೆ 10 ರಂದು ನಡಯಿತು.

ಈ ಸಂದರ್ಭದಲ್ಲಿ ಗುರುವಾಯನಕೆರೆ ವಲಯದ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಉಪಾಧ್ಯಕ್ಷರಾಗಿ  ಕೃಷ್ಣಾನಂದ ಜಿ ಕುಲಾಲ್,  ಶುಭಾಶ್ಚಂದ್ರ ಜೈನ್,  ಮಂಜುನಾಥ್ ಕುಂಬ್ಳೆ,  ಕಾರ್ಯದರ್ಶಿ ಧನಂಜಯ ರಾವ್ , ಕೋಶಾಧಿಕಾರಿ ರಮಾನಂದ ಸಾಲಿಯನ್,  ಗೌರವ ಸಲಹೆಗಾರರಾಗಿ ಪ್ರವೀಣ್ ಕುಮಾರ್ ಪಾಡ್ಯಾರು ಬೀಡು, ಸುಕೇಶ್ ಕುಮಾರ್ ಕಡಂಬು, ಸದಸ್ಯರಾಗಿ ಪ್ರತಿಭಾ ಶೆಟ್ಟಿ, ಆಶಾಲತಾ, ಪ್ರಶಾಂತ್ ಮಚ್ಚಿನ, ರಾಜಪ್ಪ ಶೆಟ್ಟಿ, ದಯಾನಂದ ರಾವ್, ನಾಗೇಶ್ ಆದೇಲು, ಕೆ ಮೋಹನ್ ಕಂಚಿಲಾಜೆ, ಜಗದೀಶ್ ಬಂಗೇರ ಕುವೆಟ್ಟು ,ವಿಠಲ ಶೆಟ್ಟಿ, ಮೋಹನ್ ನಾಯ್ಕ್.ಎ,  ಕಲಾವತಿ ಹಾಗೂ ರೀತಾ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ ,  ಜೀರ್ಣೋದ್ದಾರ ಸಮಿತಿ ಕಾರ್ಯಧ್ಯಕ್ಷರು ಜಯರಾಮ್ ಶೆಟ್ಟಿ ಪಡಂಗಡಿ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಕೇದೆ, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ನ ಅಧ್ಯಕ್ಷ ವ್ರಷಭ ಆರಿಗ ಪರಾರಿ ಗುತ್ತು,  ಗೋಪಾಲ್ ಶೆಟ್ಟಿ ಕೋರ್ಯಾರು,ಯುವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ದಿನೇಶ್ ಮೂಲ್ಯ ಕೊಂಡೆಮಾರು ,ಶಾಂತಿರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here