ಬೆಳಾಲು: ಬೆಳ್ತಂಗಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ, ಪ್ರೌಢಶಾಲಾ ಹುಡುಗರ ವಿಭಾಗದ, ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವು ಇತ್ತೀಚೆಗೆ ಮಚ್ಚಿನ ವಸತಿ ಶಾಲೆಯಲ್ಲಿ ಜರಗಿತು.
ಈ ಪಂದ್ಯಾಟದಲ್ಲಿ ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಕಬಡ್ಡಿ ತಂಡವು ರನ್ನರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ತಂಡದಲ್ಲಿ ಹತ್ತನೇ ತರಗತಿಯ ಮಹಮ್ಮದ್ ಉದೈಫ್, ಖಾದರ್ ನಝೀಬ್, ಮಹಮ್ಮದ್ ಜುನೈದ್,ಚರಣ್ ರಾಜ್, ಶಿವಕುಮಾರ್ ಒಂಬತ್ತನೇ ತರಗತಿಯ ನಿರಂಜನ್,ಧನುಷ್, ತೀರ್ಥೇಶ, ಪವನ್, ಮನೋಜ್ ಎಂಟನೇ ತರಗತಿಯ ವಂಶಿತ್, ಹೇಮಂತ್ , ದುರ್ಗೇಶ ಇವರು ಆಟಗಾರರಾಗಿ ಭಾಗವಹಿಸಿದ್ದರು.
ರವಿಚಂದ್ರ ಜೈನ್ ರವರು ತಂಡದ ವ್ಯವಸ್ಥಾಪಕರಾಗಿದ್ದರು. ಶಾಲೆಯ ಶಾರೀರಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದರವರು ತರಬೇತಿ ನೀಡಿದ್ದರು.