ಬಳಂಜ: ನಿನ್ನೆ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಮಳೆಗೆ ನಾಲ್ಕೂರು ಗ್ರಾಮದ ಮಜಲಡ್ಡ ಕರಿಯ ಪೂಜಾರಿಯವರ ಬಾವಿ ಹಾಗೂ ಮನೆಗೆ ಸಿಡಿಲು ಬಡಿದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ಸಿಡಿಲಿನ ಹೊಡೆತಕ್ಕೆ ಬಾವಿಯ ಕಂಪೌಂಡ್ ಹೊಡೆದು ಹೊಂಡ ನಿರ್ಮಾಣವಾಗಿದೆ. ಮನೆಯ ವಯರಿಂಗ್ ಮತ್ತು ಬೋರ್ ಪಂಪ್ ಕೆಟ್ಟು ಹೋಗಿದೆ. ಕಪಾಟುವಿನಲ್ಲಿದ್ದ ಗ್ಲಾಸ್ ಹಾಗೂ ಪಾತ್ರೆಗಳು ಬಿದ್ದು ಹೊಡೆದು ಹೋಗಿವೆ. ಪಂಪ್ ಹೌಸ್ ಮತ್ತು ಮನೆಯ ಮೀಟರ್ ಬಾಕ್ಸ್ ಸುಟ್ಟು ಹೋಗಿದೆ.
ಮನೆಯಲ್ಲಿ ಕರಿಯ ಪೂಜಾರಿ, ಭಾರತಿ ಹಾಗೂ ರಂಜಿತ್ ಅವರಿದ್ದು ಯಾರಿಗೂ ಅನಾಹುತ ಸಂಭವಿಸಿಲ್ಲ.
ಈ ಬಗ್ಗೆ ಮೆಸ್ಕಾಂ ಇಲಾಖೆ, ಬಳಂಜ ಗ್ರಾ.ಪಂ ಹಾಗೂ ಗ್ರಾಮಕಣೀಕರಿಗೆ ಮಾಹಿತಿ ತಿಳಿಸಲಾಗಿದೆ.