ತೆಂಕಕಾರಂದೂರು : ಗುರುವಾಯನಕೆರೆ ವಲಯದ ಹತ್ತನೇ ವರ್ಷದ ಪಾದಯಾತ್ರೆ ಯ ಪೂರ್ವಭಾವಿ ಸಭೆಯು ದಿನಾಂಕ ನ 7 ರಂದು ತೆಂಕಕಾರಂದೂರು ಸಭಾಭವನದಲ್ಲಿ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ಕಾಪಿ ನಡ್ಕ ವಸಿದ್ದರು. ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಅಚ್ಯುತ ರವರು ಮಾತನಾಡಿದರು. ವೇದಿಕೆಯಲ್ಲಿ ಒಕ್ಕೂಟದ ವಲಯ ಅಧ್ಯಕ್ಷ ಚಾಮರಾಜ ಮಾತನಾಡಿದರು.
ರಾಮನಾಥ ರೈ, ವಾಸುದೇವ ಕೊಡಂಗೆ ವೃತ್ತನ್ಯಾಸಕರು , ಮಾಜಿ ವಲಯ ಅಧ್ಯಕ್ಷ ಅಶೋಕ್ , ಗ್ರಾಮ ಪಂಚಾಯಿತಿ ಸದಸ್ಯರು , ಎಲ್ಲಾ ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು , ಊರಿನ ಗಣ್ಯತಿ ಗಣ್ಯರು , ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ಅಚ್ಯುತ ನಿರೂಪಿಸಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಸಂಜೀವ ಆಚಾರ್ಯ ಧನ್ಯವಾದ ಮಾಡಿದರು.