ತೋಟತ್ತಾಡಿ ಚರ್ಚಿನಲ್ಲಿ ಬೈಬಲ್ ಶಾಲೆ ಮತ್ತು ಸಮುದಾಯ ಭವನಕ್ಕೆ ಶಿಲಾನ್ಯಾಸ

0

ತೋಟತ್ತಾಡಿ : ತೋಟತ್ತಾಡಿ ಸಂತ ಅಂಥೋನಿಯವರ ಫೋರೋನ ದೇವಾಲಯದಲ್ಲಿ ರೆ| ಫಾ| ಕುರಿಯಾಕೋಸ್ ವೆಟ್ಟುವಯಿ ಇವರ ಆಶೀರ್ವಾದದೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.

ಶಿಲಾನ್ಯಾಸದ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಶುಭ ಹಾರೈಸಿದರು. ತರುವಾಯ ನಡೆದ ಸಭಾ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಫಾದರ್ ಕುರಿಯಾಕೋಸ್ ವೆಟ್ಟುವಯಿ ವಹಿಸಿದರು. ಗಂಡಿಬಾಗಿಲು ಚರ್ಚ್ ನ ಧರ್ಮ ಗುರುಗಳಾದ ರೇ ಫಾ ಶಾಜಿ ವೆಟ್ಟಂತಡತ್ತಿಲ್ ರವರು ಸಭೆಗೆ ಶುಭ ಹಾರೈಸಿದರು. ಚಾರ್ಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಕೆವಿ ,ಸದಸ್ಯರುಗಳಾದ ಫ್ರಾನ್ಸಿಸ್ ವಿಡಿ , ಮೇರಿ ತೊಪ್ಪಿಲ್, ರೀನಾ ಶಿಜು, ಜಯಾನಂದ, ಶಾರದಾ, ಸವಿತಾ, ಟ್ರಸ್ಟಿಗಳಾದ ವಿಲ್ಸನ್ ವಿವಿ ,ಶಾಜಿ ತೋಪಿಲ್, ಜಾರ್ಜ್ ತೋಪಿಲ್,ಅಮಿತ್ ಡಿ ಕೆ, ಮಾಜಿ ತಾಲೂಕು ಪಂಚಾಯತ್ ಸದ್ಯರಾದ ಸೆಬಾಸ್ಟಿಯನ್ ವೈಪಾನ, ಸೆಬಾಸ್ಟಿಯನ್ ಪೋಕ್ಕಂತಾಡಿ,ದೇವಸಿಕುಟ್ಟಿ ತಿರುದನತಿಲ್, ಜಾರ್ಜ್ ಕಂಡತಿಂಕರ,ರಾಜು ತಿರುದನತಿಲ್, ಪ್ರಿನ್ಸ್ ತೋಮಸ್, ಶೈನು ವಿ ಎಲ್ , ಡೆನ್ನಿ ಪಿಡಿ, ರೆಜಿ ಕೆ ಎಮ್. ಮೊದಲಾದವರು ಉಪಸ್ಥಿತರಿದ್ದರು.

ರೆ|ಫಾ ಜೋಸ್ ಪೂವತ್ತಿಂಗಲ್ ಸ್ವಾಗತಿಸಿ ಕಾರ್ಯದರ್ಶಿ ಪ್ರದೀಪ್ ಕೆ.ಸಿ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಸಂತೋಷ್ ಸಿ.ಕೆ ರವರು ನೆರವೇರಿಸಿದರು.

LEAVE A REPLY

Please enter your comment!
Please enter your name here