ಬೆಳಾಲು ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿಮಕ್ಕಳ ದಿನಾಚರಣೆ, ಸನ್ಮಾನ

0

ಬೆಳಾಲು: ಇಲ್ಲಿಯ ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ನ.18 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ, ಸನ್ಮಾನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷೆ ಪುಟಾಣಿ ಪ್ರಾಪ್ತಿ ವಹಿಸಿದ್ದರು. ಗಣ್ಯರಾದ ಸಂಜೀವಗೌಡ ಕನಿಕ್ಕಿಲ ಉದ್ಘಾಟಿಸಿದರು.ಬೆಳಾಲಿನ ವೈದ್ಯ ಡಾ.ಚೇತನ್ ಕುಮಾರ್ ಹಾಗೂ ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಮಾಯ ಹಿ. ಪ್ರಾ. ಶಾಲಾ ವಿದ್ಯಾರ್ಥಿನಿ ಕು.ಜಾಹ್ನವಿ ಇವರನ್ನು ಸನ್ಮಾನಿಸಲಾಯಿತು.

ಮಾಯ ಸ. ಉ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ವಿಠ್ಠಲ ಎಂ. ಮಕ್ಕಳ ದಿನಾಚರಣೆಯ ಬಗ್ಗೆ ಮಾತನಾಡಿದರು.ವೇದಿಕೆಯಲ್ಲಿ ಶಿವಪ್ಪ ಉರೆಜ್ಜ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಜಯಂತಿ, ಹಾಗೂ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಶೀಲಾವತಿ, ಶ್ರೀಮತಿ ಪ್ರೇಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ತಾಯಂದಿರು ಹಾಜರಿದ್ದರು. ಶ್ರೀಮತಿ ಉಷಾ ಕಾರ್ಯಕ್ರಮದಲ್ಲಿ ನೆರೆದಿರುವವರನ್ನು ಸ್ವಾಗತಿಸಿದರು. ಅಂ. ಕಾರ್ಯಕರ್ತೆ ಶ್ರೀಮತಿ ಭಾರತಿ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀಮತಿ ಭವಾನಿ ಧನ್ಯವಾದವಿತ್ತರು. ಸಹಾಯಕಿಯಾದ ಶ್ರೀಮತಿ ವಿಮಲ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here