ಉಜಿರೆಯಲ್ಲಿ ಕುಮಾರ ಕೃಪಾ ಕಟ್ಟಡದ ಉದ್ಘಾಟನೆ ಹಾಗೂ ಬಿಜೋಯ್ ಏಜೆನ್ಸಿಸ್ ಸ್ಥಳಾಂತರ

0

ಉಜಿರೆ: ಚಾರ್ಮಾಡಿ ರಸ್ತೆಯ ಹೋಟೆಲ್ ಹಳ್ಳಿಮನೆ ಸಮೀಪ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಕಟ್ಟಡ ಕುಮಾರ ಕೃಪಾ ಇದರ ಉದ್ಘಾಟನೆ ಹಾಗೂ ಬಿಜೋಯ್ ಏಜೆನ್ಸಿಸ್ ಇದರ ಸ್ಥಳಾಂತರ ಕಾರ್ಯಕ್ರಮ ನ.20ರಂದು ಜರುಗಿತು .

ನೂತನ ವಾಣಿಜ್ಯ ಕಟ್ಟಡವನ್ನು ಕುಮಾರ ಕೃಪಾವನ್ನು ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಉದ್ಘಾಟಿಸಿ ಶುಭ ಹಾರೈಸಿದರು.

ಉಜಿರೆ ಜನಾರ್ದನ ದೇವಸ್ಥಾನದ ಶರತ್‌ಕೃಷ್ಣ ಪಡೆಟ್ನಾಯ ದೀಪ ಪ್ರಜ್ವಲನೆ ಮಾಡಿದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಕೆನರಾ ಬ್ಯಾಂಕ್ ಉಜಿರೆಯ ಶಾಖಾಧಿಕಾರಿ ರಾಜಶ್ರೀ ಭಾಗವಹಿಸಿದ್ದರು, ಮಾಲಕ ಎ.ಕೆ. ಶಿವನ್ (ಮಾಜಿ ಸೈನಿಕ), ಬಿಜೋಯ್ ಮನೆಯವರು ಅತಿಥಿಗಳನ್ನು ಗೌರವಿಸಿದರು. ಗ್ರಾಹಕರು, ಹಿತೈಷಿಗಳು. ಊರವರು ಹಾಜರಿದ್ದರು.

LEAVE A REPLY

Please enter your comment!
Please enter your name here