ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮೊಗರುಗುತ್ತು ಕರಿಯಪ್ಪ ಬಂಟ ಫೌಂಡೇಶನ್‌ನಿಂದ 2 ಲಕ್ಷ ರೂ.ದೇಣಿಗೆ

0

ಪುತ್ತೂರು: ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಮೊಗರು ಗುತ್ತು ಕರಿಯಪ್ಪ ಬಂಟ ಫೌಂಡೇಶನ್ ಸೋಂಪಾಡಿ ಗುತ್ತು ಸವಣೂರು ಇದರ ಪ್ರಧಾನ ಕಾರ್ಯದರ್ಶಿ ಅಜಿಲಾಡಿ ಸದಾಶಿವ ರೈ ಸೋಂಪಾಡಿಯವರು ರೂ.2ಲಕ್ಷ ಮೌಲ್ಯದ ಚೆಕ್ಕನ್ನು ಎಲಿಯ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ಭೇಟಿನೀಡಿ ದೇವಳದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬ್ರಹ್ಮಕಲಶ ಸಮಿತಿಯ ಸಂಚಾಲಕರಾದ ಕೃಷ್ಣಕುಮಾರ್ ರೈಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮೊಗರುಗುತ್ತು ಕರಿಯಪ್ಪ ಬಂಟ ಫೌಂಡೇಷನ್ ಜೊತೆ ಕಾರ್ಯದರ್ಶಿ ಎ. ದಯಾಸಾಗರ್ ಪೂಂಜ, ಜೀರ್ಣೋದ್ಧಾರ ಸಮಿತಿ ಸದಸ್ಯ ಉದಯಕುಮಾರ್ ರೈ ಬಾಕುಡ, ಗಂಗಾಧರ ರೈ ಸೊರಕೆ, ಶಿವರಾಮ ರೈ ಸೊರಕೆ, ರಾಮಯ್ಯ ಶೆಟ್ಟಿ ಸಂಪಿಲ, ಸುಧಾ ಲಕ್ಷ್ಮೀ ಆರ್ ಶೆಟ್ಟಿ ಬಾಕುಡ, ಸುಭಾಷಿಣಿ ಪೂಂಜ ಬಾಕುಡ, ರಾಘವ ನೆಕ್ಕಿಲು, ಲಕ್ಷ್ಮೀನಾರಾಯಣ ಮಯ್ಯ ಎಲಿಯ, ದೇವಳದ ವ್ಯವಸ್ಥಾಪನಾ ಅಧ್ಯಕ್ಷ ಕರುಣಾಕರ ಗೌಡ ಎಲಿಯ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವವು ಫೆ.೦೧ರಿಂದ ೦೬ ರವರೇಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

LEAVE A REPLY

Please enter your comment!
Please enter your name here