ವಿಟ್ಲದಲ್ಲಿ ವಿಟ್ಲೋತ್ಸವ -2022  ಸನ್ಮಾನ ಕಾರ್ಯಕ್ರಮ

0

ವಿಟ್ಲ: ಮಹತೋಬಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವದ ಸಲುವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜ.20ರಂದು ವಿ.ಆರ್.ಸಿ. ವಿಟ್ಲ ಇದರ ಆಶ್ರಯದಲ್ಲಿ  ರಮಾನಾಥ ವಿಟ್ಲ ಇದರ ಸಾರಥ್ಯದಲ್ಲಿ ವಿಟ್ಲೋತ್ಸವ -2022ರ ಪ್ರಯುಕ್ತ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ತುಳು ನಾಟಕ ನಡೆಯಿತು. ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಬಂಗಾರು ಅರಸರು ದೀಪಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಟ್ಲದ ತುಳಸಿದಾಸ್ ಶೆಣೈ ಹಾಗೂ ಜ್ಯೋತಿ ಶೆಣೈರವರ ಪುತ್ರ,  ಕಳೆದ ಸಾಲಿನಲ್ಲಿ ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತನುಜ್ ಶೆಣೈ ಹಾಗೂ ವಿಟ್ಲದಲ್ಲಿ 2012ರಿಂದ ಪೂರ್ಣ ಜವಾಬ್ದಾರಿ ಹೊತ್ತುಕೊಂಡು ಕಸವಿಲೆವಾರಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಗೋಪಾಲಕೃಷ್ಣ ರೈ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.  ಕೃಷ್ಣಯ ವಿಟ್ಲ, ಕಲಾಸಂಗಮದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್, ಮೋಹನ್ ಕಟ್ಟೆ, ಅಶೋಕ್ ಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಆರ್ ಸಿ ವಿಟ್ಲ ಇದರ ನಿರ್ದೇಶಕರಾದ ರಮಾನಾಥ ವಿಟ್ಲ ಸ್ವಾಗತಿಸಿ, ವಕೀಲರಾದ ನಟೇಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here