ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟ-ಜಿ.ಎಲ್ ಟ್ರೋಫಿ

0

ಪುತ್ತೂರು; ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ‌ ಜ್ಯುವೆಲ್ಲರ್ಸ್ ನ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟ ಜಿ.ಎಲ್ ಟ್ರೋಫಿಯು ಜ.30 ನಡೆಯಿತು. ಪಂದ್ಯಾಟವನ್ನು ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮ್ಹಾಲಕ ಬಲರಾಮ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಸಿಬ್ಬಂದಿಗಳಿಂದ ಪಂದ್ಯಾಟ ಆಯೋಜಿಸುವ ಬೇಡಿಕೆ ಬಂದಿದ್ದು ಪ್ರಥಮ ಬಾರಿಗೆ ಪಂದ್ಯಾಟ ಆಯೋಜಿಸಿಕೊಳ್ಳಲಾಗಿದೆ. ಸಂಸ್ಥೆಯ ನಾಲ್ಕು ಶಾಖೆಗಳ ಸಿಬ್ಬಂದಿಗಳು ಒಟ್ಟು ಕ್ರೀಡೆಯೊಂದಿಗೆ ಮನರಂಜಿಸು ಅವಕಾಶವಾಗಿದೆ. ಪಂದ್ಯಾಟದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ. ಪಂದ್ಯಾಟ ಮುಗಿದ ಮೇಲೂ ಎಂದಿನಂತೆ ಅನ್ಯೊನ್ಯತೆಯಿಂದಿರುವಂತೆ ಅವರು ಕಿವಿಮಾತು ಹೇಳಿದರು. ಲಕ್ಷ್ಮಿಕಾಂತ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ನಾಲ್ಕು ಶಾಖೆಗಳ  ಸಿಬ್ಬಂದಿಗಳ  ತಂಡವು ಪಂದ್ಯಾಟದಲ್ಲಿ ಭಾಗವಹಿಸಿದ್ದು, ಹಾಸನದ ತಂಡ ಪ್ರಥಮ ಹಾಗೂ ಪುತ್ತೂರು ಬಿ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಲಕ್ಷ್ಮಿಕಾಂತ ಆಚಾರ್ಯ ಹಾಗೂ ಸುಧನ್ವ ಆಚಾರ್ಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

LEAVE A REPLY

Please enter your comment!
Please enter your name here