ಕಾಣಿಯೂರು: ತುಳುನಾಡಿನ ಅತ್ಯಂತ ಪುರಾತನ ಸುಮಾರು 800 ವರ್ಷದ ಇತಿಹಾಸವಿರುವ ಕಾರಣಿಕ ಕ್ಷೇತ್ರವಾಗಿರುವ ಚಾರ್ವಾಕ ಗ್ರಾಮದ ದೈಪಿಲ ಕ್ಷೇತ್ರದಲ್ಲಿ ಶ್ರೀ ಶಿರಾಡಿ ರಾಜನ್ ದೈವದ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವದ ಪ್ರತಿಷ್ಠೆ ಮತ್ತು ನೇಮೋತ್ಸವವು ಫೆ 6,7, 8ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣವು ದೈಪಿಲ ಕ್ಷೇತ್ರದಲ್ಲಿ ಜ 31ರಂದು ನಡೆಯಿತು. ಅರುವಗುತ್ತಿನ ಯಜಮಾನರಾದ ಪ್ರದೀಪ್. ಆರ್. ಗೌಡ, ಚಂದ್ರಕಲಾ ಜಯರಾಮ್ ಅರುವಗುತ್ತು, ಕ್ಷೇತ್ರಕ್ಕೆ ಸಂಬಂಧಪಟ್ಟ ನಾಲ್ಕು ಮನೆಯವರಾದ ರಾಮಣ್ಣ ಗೌಡ ಖಂಡಿಗ, ಶೇಖರ ಗೌಡ ಅಂಬುಲ, ವಿಜಯ ಕೆಳಗಿನಕೇರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಸಿರು ಹೊರೆ ಕಾಣಿಕೆ ಬಗ್ಗೆ ಪ್ರವೀಣ್ ಕುಂಟ್ಯಾನ, ವಿಶ್ವನಾಥ್ ಅಂಬುಲ, ಆಮಂತ್ರಣ ವಿತರಣೆ ಬಗ್ಗೆ ಜಯಂತ ಅಂಬುಲ ವಿವರಿಸಿದರು.
ಫೆ 6,7,8ರಂದು ಕಟ್ಟೆಗಳ ಪ್ರತಿಷ್ಠಾಪನೆ, ನೇಮೋತ್ಸವ:
ದೈಪಿಲ ಶ್ರೀ ಕ್ಷೇತ್ರದಲ್ಲಿ ಕಟ್ಟೆಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಮತ್ತು ಮೂಲಸ್ಥಾನದಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ದೈವದ ಪ್ರತಿಷ್ಠೆಯು ಫೆ6ರಿಂದ ಫೆ 7ರವರೆಗೆ ನಡೆಯಲಿದೆ.