ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಜ್ಜಾವರ ವಲಯ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ ಆಯ್ಕೆ

0

 

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಅಜ್ಜಾವರ ವಲಯದ ವಲಯ ಸಮಿತಿಯನ್ನು ಅಜ್ಜಾವರ ವಲಯ ಕಚೇರಿಯಲ್ಲಿ ನಡೆದ ಒಕ್ಕೂಟಗಳ ಅಧ್ಯಕ್ಷರ ಸಭೆಯಲ್ಲಿ ರಚಿಸಲಾಯಿತು.
ಅಜ್ಜಾವರ ವಲಯದ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ, ಕಾರ್ಯದರ್ಶಿಯಾಗಿ ವಲಯ ಮೇಲ್ವಿಚಾರಕಿ ಶ್ರೀಮತಿ ವಿಶಾಲ, ಉಪಾಧ್ಯಕ್ಷರಾಗಿ ಸುಧೀರ್ ಕಾಂತಮಂಗಲ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಉದ್ದಂತಡ್ಕ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಹರಿಣಾಕ್ಷಿ ಮೇನಾಲ ಆಯ್ಕೆಯಾದರು. ಈ ಸಭೆಯಲ್ಲಿ ಸುಳ್ಯ ಯೋಜನಾಧಿಕಾರಿ ನಾಗೇಶ್ ಮಾಹಿತಿ ನೀಡಿದರು. ಅಜ್ಜಾವರ ವಲಯದ ಸೇವಾ ನಿರತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here