ಗೋಳಿತ್ತೊಟ್ಟು: ಹಂಪ್‌ಗೆ ಬಿಳಿಬಣ್ಣ ಹಚ್ಚಿದ ಜೀಪು ಚಾಲಕ

0

ನೆಲ್ಯಾಡಿ: ಗೋಳಿತ್ತೊಟ್ಟು ಪೇಟೆಯಲ್ಲಿ ಅಳವಡಿಸಲಾಗಿದ್ದ ಹಂಪ್‌ಗೆ ಜೀಪು ಚಾಲಕ ಸದಾನಂದ ಗೌಡ ಡೆಬ್ಬೇಲಿಯವರು ಸ್ವಯಂ ಪ್ರೇರಿತರಾಗಿ ವೈಟ್ ಸಿಮೆಂಟ್ ಹಚ್ಚುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗೋಳಿತ್ತೊಟ್ಟಿನಿಂದ ಆಲಂತಾಯಕ್ಕೆ ತೆರಳುವ ರಸ್ತೆಯಲ್ಲಿ ಗೋಳಿತ್ತೊಟ್ಟಿನಿಂದ ಗ್ರಾ.ಪಂ. ತಿರುವು ತನಕ ಇತ್ತೀಚೆಗೆ ಮರು ಡಾಮರೀಕರಣ ಕಾಮಗಾರಿ ನಡೆದಿದ್ದು ಈ ವೇಳೆ ಗೋಳಿತ್ತೊಟ್ಟು ರಿಕ್ಷಾ ನಿಲ್ದಾಣದ ಬಳಿಯಲ್ಲಿ ಹಂಪ್ ಅಳವಡಿಸಲಾಗಿತ್ತು. ದ್ವಿಚಕ್ರ, ರಿಕ್ಷಾ ಹಾಗೂ ಇತರೇ ವಾಹನಗಳ ಚಾಲಕರು ಹಂಪ್ ಅರಿವಿಗೆ ಬಾರದೇ ಸಂಚರಿಸುತ್ತಿದ್ದುದರಿಂದ ತೊಂದರೆಗೆ ಸಿಲುಕುತ್ತಿದ್ದರು. ಇದನ್ನು ಮನಗಂಡ ಜೀಪು ಚಾಲಕ ಸದಾನಂದ ಗೌಡ ಡೆಬ್ಬೇಲಿಯವರು ಸ್ವಯಂ ಪ್ರೇರಿತರಾಗಿ ಹಂಪ್‌ಗೆ ವೈಟ್ ಸಿಮೆಂಟ್ ಹಚ್ಚುವ ಮೂಲಕ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ಸದಾನಂದ ಗೌಡರ ಈ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆಯೂ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here