ಪುತ್ತೂರು: ಸಾಮೆತ್ತಡ್ಕ ನಿವಾಸಿ, ಪುತ್ತೂರು ಮುಖ್ಯರಸ್ತೆಯ ಅರುಣಾ ಥಿಯೇಟರ್ ಬಳಿಯ ಶ್ರೀಕಾಂತ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಜನತಾ ಸೆಲೂನ್ ಮಾಲಕ ಚಂದ್ರಹಾಸ ಸಾಲ್ಯಾನ್ ಅವರ ಪುತ್ರ ದಿ. ಅಭಿನವ್ ಇವರ ಪ್ರಥಮ ಪುಣ್ಯತಿಥಿಯ ಅಂಗವಾಗಿ ಫೆ.6 ರಂದು ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ ಬಟ್ಟೆ ಹಾಗೂ ಸಿಹಿತಿಂಡಿ ವಿತರಿಸಲಾಯಿತು. ಆಭಿನವ್ ಅವರ ಪ್ರಾಥಮಿಕ, ಫ್ರೌಡ, ಪದವಿಪೂರ್ವ ಹಾಗೂ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಸಹಪಾಠಿ ಗೆಳೆಯರ ಬಳಗದ ವತಿಯಿಂದ ಆಶ್ರಮದ ನಿವಾಸಿಗಳಿಗೆ ವಸ್ತ್ರ ಹಾಗೂ ಸಿಹಿ ತಿಂಡಿ ವಿತರಿಸಿ ಅಭಿನವ್ ಅವರನ್ನು ಸ್ಮರಿಸಲಾಯಿತು. ಅಭಿನವ್ ತಂದೆ ಚಂದ್ರಹಾಸ ಸಾಲ್ಯಾನ್, ತಾಯಿ ತೇಜಸ್ವಿನಿ, ಸಹೋದರ ಆಪ್ತ , ಸ್ನೇಹಿತರಾದ ಸುಮಂತ್ ,ಅಭಿಷೇಕ್, ವಿಕ್ರಮ್ ಮತ್ತಿತರರು ಉಪಸ್ಥಿತರಿದ್ದರು.