ಪುತ್ತೂರು: ಬನ್ನೂರು ಕಟ್ಟೆ ನಿವಾಸಿ ಮೋಹನ್ ನಾಯ್ಕ್ ಎಂಬವರ ಪುತ್ರ ಅವಿವಾಹಿತ ಕೀರ್ತನ್(33ವ) ಎಂಬವರು ಫೆ. 12ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಕೀರ್ತನ್ ಅವರು ಮ್ಯಾಕಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಆರೋಗ್ಯದಲ್ಲಿ ಏರುಪೇರಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ತಂದೆ ಮೋಹನ್ ನಾಯ್ಕ್, ತಾಯಿ ಜ್ಯೋತಿ, ಸಹೋದರ ಶಿವ ಅವರನ್ನು ಅಗಲಿದ್ದಾರೆ.