ಪುತ್ತೂರು: ಕೆಮ್ಮಾರದಲ್ಲಿರುವ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೆಂಕಟರಮಣ ಭಟ್ ಅವರನ್ನು ತಕ್ಷಣ ಶಾಲೆಯಿಂದ ಬದಲಾಯಿಸಬೇಕು, ಇಲ್ಲದಿದ್ದಲ್ಲಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್.ಡಿ.ಎಂ.ಸಿ. ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮನವಿ ನೀಡಿ ಎಚ್ಚರಿಕೆ ನೀಡಲಾಗಿದೆ.
ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ನಿರ್ಣಯದ ಪ್ರಕಾರ ಶಿಕ್ಷಕ ವೆಂಕಟರಮಣ ಭಟ್ ಅವರನ್ನು ಬದಲಾಯಿಸುವ ಬಗ್ಗೆ ಜನವರಿ 12ರಂದು ತಮಗೆ ಮನವಿ ನೀಡಲಾಗಿದೆ. ಆದರೆ, ತಮ್ಮ ಕಡೆಯಿಂದ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಆದುದರಿಂದ ಮಾರ್ಚ್ 1ರಿಂದ ಶಾಲೆಯ ಮುಂದೆ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಎಸ್.ಡಿ.ಎಂ.ಸಿ. ವತಿಯಿಂದ ಫೆ.16ರಂದು ನೀಡಲಾದ ಮನವಿಯಲ್ಲಿ ತಿಳಿಸಲಾಗಿದೆ. ಎಸ್.ಡಿ.ಎಂ.ಸಿ. ಅಧ್ಯಕ್ಷ ಹಂಝ ಬಡ್ಡೆಮೆ ನೇತೃತ್ವದಲ್ಲಿ ಮೊಯಿದಿನ್ ಕುಟ್ಟಿ, ಇಸ್ಮಾಯಿಲ್ ಎಸ್.ಎಂ., ಪದ್ಮನಾಭ ಶೆಟ್ಟಿ, ಸಲಿಕತ್, ವಾಮನ ಮತ್ತು ಅಬ್ದುಲ್ ಖಾದರ್ ಅವರು ಸಹಿ ದಾಖಲಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗೆ ಮನವಿ ಸಲ್ಲಿಸಿದ್ದಾರೆ.