ಆರ್ಯಾಪು ನಿವಾಸಿ ಕಲಂದರ್ ಆಸಿಫ್ ನಾಪತ್ತೆ – ದೂರು ದಾಖಲು

0

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರ್ ನಿವಾಸಿ ಅಬೂಬಕರ್ ಸಜಿಪ ಅವರ ಪುತ್ರ ಕಲಂದರ್ ಆಸಿಫ್ (30ವ) ರವರು ಫೆ.15 ರಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಫೆ.16 ರಂದು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಂದರ್ ಆಸಿಫ್ ಅವರು ಗಾಳಿಮುಖ ಜವುಳಿ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಫೆ.15 ರಂದು ಮನೆಯಿಂದ ಹೋದವರು ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಆಸಿಫ್ ನಾಪತ್ತೆಯಾಗಿರುವುದಾಗಿ ಅವರ ಸಹೋದರ ನೌಶದ್ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here