ಅಮರಪಡ್ನೂರು ಗ್ರಾಮದ ಶೇಣಿ – ಹೊಸಮಜಲು ರಸ್ತೆಯ ದುರಸ್ತಿ ಕಾಮಗಾರಿ ಕೆಲಸವನ್ನು ಪ್ರಾರಂಭಿಸಲಾಯಿತು.
ತೀರಾ ಹದಗೆಟ್ಟ ರಸ್ತೆಯ ದುರಸ್ತಿ ಪಡಿಸುವಂತೆ ಸ್ಥಳೀಯ ರು ಬೇಡಿಕೆ ಇರಿಸಲಾಗಿತ್ತು. ವಿಪರೀತ ಮಳೆಯಿಂದಾಗಿ ಕೆಲಸ ನಿರ್ವಹಿಸಲಾಗಲಿಲ್ಲ ಎಂದು ಕಳೆದ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಇದೀಗ ಸ್ಥಳೀಯ ಪಂಚಾಯತ್ ಸದಸ್ಯ ಅಶೋಕ ಚೂಂತಾರು ಮತುವರ್ಜಿ ವಹಿಸಿ ತುರ್ತು ಕಾಮಗಾರಿ ಅನುದಾನದಲ್ಲಿ ದುರಸ್ತಿ ಕಾಮಗಾರಿಯನ್ನು ಜೆ.ಸಿ.ಬಿ ಬಳಸಿ ನಿರ್ವಹಿಸಲಾಗಿದೆ. ಇದಕ್ಕೆ ಪಂಚಾಯತ್ ನಿಂದ ಕ್ರಿಯಾ ಯೋಜನೆ ತಯಾರಿಸಿ ಅನುದಾನವಿರಿಸಲಿಲ್ಲ ಎಂದು ತಿಳಿಸಿದರು.