ಉಪ್ಪಿನಂಗಡಿ : ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನಿಧಿ ಸಂಗ್ರಹ

0

ಉಪ್ಪಿನಂಗಡಿ: ಯುವಶಕ್ತಿ ಸೇವಾಪಥದ ನೇತೃತ್ವದಲ್ಲಿ ಸೇವಾ ಜಾಗರಣಾ ಉಪ್ಪಿನಂಗಡಿ ಸೇರಿದಂತೆ ಹಲವು ಸಮಾನಮನಸ್ಕ ಸಂಘಟನೆಗಳ ಸಹಕಾರದಲ್ಲಿ ಇಬ್ಬರು ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನೆರವು ನೀಡಲು ಶಿವರಾತ್ರಿ ಮಖೆ ಜಾತ್ರೆಯ ಸಂದರ್ಭ ಉಪ್ಪಿನಂಗಡಿಯಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯಿತು.

ಖ್ಯಾತ ನಾಸಿಕ್ ಬ್ಯಾಂಡ್ ತಂಡ ಹಾಗೂ ಇಬ್ಬರು ವೇಷಧಾರಿಗಳ ವಿಶೇಷ ಆಕರ್ಷಣೆಗಳೊಂದಿಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಶಿವರಾತ್ರಿ ಮಖೆ ಜಾತ್ರೆಯ ಸಂದರ್ಭ ಸಾಮಾಜಿಕ ಕಳಕಳಿಯುಳ್ಳ ಯುವಕರ ತಂಡವು ಪೇಟೆ ಹಾಗೂ ದೇವಾಲಯದ ವಠಾರದಲ್ಲಿ ಸಂಚರಿಸಿ, ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಪುಣಾಣಿಯ ಚಿಕಿತ್ಸೆಗೆ ಹಾಗೂ ಬಾಲಕಿಯೋರ್ವಳ ಕಿಡ್ನಿ ಮರುಜೋಡಣಾ ಚಿಕಿತ್ಸೆಗಾಗಿ ಧನಸಹಾಯ ಸಂಗ್ರಹ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here