ಅರಂತೋಡು: ರಬ್ಬರ್ ಬೆಳೆಗಾರರ ಸಂಘದ ಮಹಾಸಭೆ

0

ನೂತನ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಆಯ್ಕೆ 

ಅರಂತೋಡು ರಬ್ಬರ್ ಬೆಳೆಗಾರರ ಸಂಘದ ಮಹಾಸಭೆಯು ಅ.12 ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವೆಂಕಟ್ರಮಣ ಪೆತ್ತಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ರಬ್ಬರ್ ಬೋರ್ಡ್ ಪ್ರಾದೇಶಿಕ ಕಚೇರಿಯ ಉಪ ಆಯುಕ್ತ ಸುರೇಶ್ ಡಿ., ಸುಳ್ಯ ರಬ್ಬರ್ ಬೋರ್ಡ್ ಸಹಾಯಕ ಅಭಿವೃದ್ದಿ ಅಧಿಕಾರಿ ಸಜಿ ಮಾಥ್ಯು ವಹಿಸಿದ್ದರು.


ಈ ಸಂದರ್ಭದಲ್ಲಿ ಸಂಘದ ನಿದೇರ್ಶಕರು, ಗೌರವ ಸಲಹೆಗಾರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಶಶಿಕುಮಾರ್ ಉಳುವಾರು ಅಡ್ತಲೆ, ಉಪಾಧ್ಯಕ್ಷರಾಗಿ ದಿನೇಶ ಗುರುಂಪು ಮರ್ಕಂಜ, ನಿರ್ದೇಶಕರುಗಳಾಗಿ ಯಶೋಧರ ಅಡ್ಕಬಳೆ, ಶ್ರೀಮತಿ ಲತಾ ಶಿವಪ್ರಸಾದ್, ಶ್ರೀಮತಿ ಪುಷ್ಪ ಮೇದಪ್ಪ ಉಳುವಾರು, ರಾಮಚಂದ್ರ ಮಾವಿನಕಟ್ಟೆ ಮರ್ಕಂಜ, ಗೌರವ ಸಲಹೆಗಾರರಾಗಿ ಕೆ. ಆರ್. ಗಂಗಾಧರ್, ಎ.ಕೆ.ಜತ್ತಪ್ಪ ಮಾಸ್ತರ್, ಹೊನ್ನಪ್ಪ ಗೌಡ ಅಡ್ತಲೆ, ಪ್ರಭಾಕರ್ ರೈ, ಸಂತೋಷ್ ಕುತ್ತಮೊಟ್ಟೆ, ವಿಜೇತ ಮರುವಳ ಆಯ್ಕೆಯಾದರು.

LEAVE A REPLY

Please enter your comment!
Please enter your name here