ಕೈಕಾರ ಪುಂಡಿಕಾಯಿ ರಕ್ತೇಶ್ವರಿ ಪರಿವಾರ ದೈವಗಳ ಪುನರ್ ಪ್ರತಿಷ್ಠೆ , ನೇಮೋತ್ಸವ ಸಂಪನ್ನ

0

ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ಪುಂಡಿಕಾಯಿ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ರಕ್ತೇಶ್ವರಿ ಗುಳಿಗ ದೈವಗಳ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ , ನೇಮೊತ್ಸವ ಮಾ. 01 ರಂದು ಸಂಪನಗೊಂಡಿತು.

ಫೆ.28ರಂದು ಕೆಮ್ಮಿಂಜೆ ಬ್ರಹ್ಮಶ್ರಿ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ರಕ್ತೇಶ್ವರಿ , ಗುಳಿಗ ,ನಾಗ ಸಾನಿಧ್ಯಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ,ತಂಬಿಲ ಸೇವೆಗಳು ನಡೆದು ಮಧ್ಯಾಹ್ನ ಸೇರಿದಂತಹ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಮಾರ್ಚ್ 1 ರಂದು ಸಂಜೆ ಶ್ರಿ ಮಹಾಲಿಂಗೇಶ್ವರ ಭಜನಾತಂಡ ಬೆಟ್ಟಂಪಾಡಿ ಇವರು ವತಿಯಿಂದ ಅಕರ್ಷಕ ಕುಣಿತ ಭಜನಾ ಸೇವೆ ನಡೆದು ರಾತ್ರಿ ರಕ್ತೇಶ್ವರಿ , ಗುಳಿಗ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಪುಣ್ಯಕಾರ್ಯದಲ್ಲಿ ಕುಟುಂಬದ ಹಿರಿಯರು ,ಊರಿನ ಹತ್ತು ಸಮಸ್ತರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here