ಬಡಗನ್ನೂರುಃ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಆದಿದೈವ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರ ಗುರುಪೀಠ ದೇಯಿಬೈದೆತಿ- ಕೋಟಿ ಚೆನ್ನಯ ಮೂಲಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಮಾ.4 ರಂದು ಬೆಳಗ್ಗೆ 5 ರಿಂದ ತ್ರೀನಾರಿ ಕೇಳ ಗಣಪತಿ ಹೋಮ, ಗುರು ಪೂಜೆ,ತೋರಣ ಮೂಹುರ್ತ ನಾಗದೇವರಿಗೆ ತನು ತಂಬಿಲ ಸೇವೆ, ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, 8.45 ರಿಂದ ಧ್ವಜಾರೋಹಣ, ಪಂಚ ಪರ್ವ ಕಾರ್ಯಕ್ರಮ ನಡೆಯಿತು. ಮೂಡಬಿದ್ರೆ ಶಿವನಾಂದ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಭಜನಾ ಕಾರ್ಯಕ್ರಮ ಉದ್ಘಾಟನೆ;
ಶ್ರೀ ಕ್ಷೇತ್ರದಲ್ಲಿ ಮಾ.4 ರಿಂದ ಮಾ.6 ರ ತನಕ ಪ್ರತಿದಿನ ನಡೆಯುವ ಭಜನಾ ಸಂಕೀರ್ತನೆ ಕಾರ್ಯಕ್ರಮವನ್ನು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪಿತಾಂಬರ ಹೆರಾಜೆ ಮತ್ತು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಮಿತಿ ಪದಾಧಿಕಾರಿಗಳು ಉದ್ಘಾಟನೆ ಮಾಡಿದರು.
ಬೆಟ್ಟಂಪಾಡಿ ಶ್ರೀ ಕೃಷ್ಣ ಭಜನಾ ತಂಡದ ಸದಸ್ಯರಿಂದ ಪ್ರಥಮ ದಿವಸ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ , ಗೌರವಾಧ್ಯಕ್ಷ ಜಯಂತ ನಡುಬೈಲು, ಉಪಾಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಜಾತ್ರೋತ್ಸವ ಸಮಿತಿ ಕೋಶಾಧಿಕಾರಿ ಶೇಖರ ಬಂಗೇರ ಬೆಳ್ತಂಗಡಿ, ಹಿತೇಶ್ ಶ್ರಾವ್ಯ ,ವಸಂತ ಅಂಚನ್, ನಾರಾಯಣ ಮಚ್ಚಿ ಉಪಸ್ಥಿತರಿದ್ದರು.