ಸುಳ್ಯಕ್ಕೆ ಸತ್ಯಜಿತ್ ಸುರತ್ಕಲ್ ಭೇಟಿ

0

ಬಿಜೆಪಿ ನಾಯಕರೊಂದಿಗೆ ಕುಶಲೋಪರಿ

ಹಿಂದುತ್ವದ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದರು.
ಕೊಡಗು ಜಿಲ್ಲೆಗೆ ಸುಳ್ಯ ಮಾರ್ಗವಾಗಿ ಹೋಗುತ್ತಿದ್ದಾಗ ಅವರು ಗಾಂಧಿನಗರ ಕಲ್ಕುಡ ದೇವಸ್ಥಾನಕ್ಕೆ ಭೇಟಿ ನೀಡಿದರು. ಸತ್ಯಜಿತ್ ರವರನ್ನು ಅವರ ಅಭಿಮಾನಿಗಳಾದ ಶಿವಾನಂದ ಪೂಜಾರಿ, ದಿನೇಶ್ ವರ್ಷ, ಅಮೃತ್ ರಾಜ್ ಮೊದಲಾದವರು ಬರಮಾಡಿಕೊಂಡರು.


ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸತ್ಯಜಿತ್ ಸುರತ್ಕಲ್, ದೈವಸ್ಥಾನಕ್ಕೆ ಬಂದಿದ್ದ ಬಿಜೆಪಿ ಹಿರಿಯ ನಾಯಕ ಎನ್.ಎ. ರಾಮಚಂದ್ರ, ಕಲ್ಕುಡ ದೈವಸ್ಥಾನದ ಅಧ್ಯಕ್ಷ ಪಿ.ಕೆ.ಉಮೇಶ್, ಸೋಮನಾಥ ಪೂಜಾರಿ, ಗಿರೀಶ್ ಕಲ್ಲುಗದ್ದೆ ಮೊದಲಾದವರೊಂದಿಗೆ ಕುಳಿತು ಕೆಲ ಹೊತ್ತು ಕುಶಲೋಪರಿ ಮಾತನಾಡಿ ಬಳಿಕ ಅಲ್ಲಿಂದ ಗೋಣಿಕೊಪ್ಪಕ್ಕೆ ತೆರಳಿದರು.

LEAVE A REPLY

Please enter your comment!
Please enter your name here