ಅಕ್ರಮ ಮರಳು ಸಾಗಾಟ ಪ್ರಕರಣದ ಆರೋಪಿಗಳು ದೋಷಮುಕ್ತ

0

ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಿಗೂಡು ಎಂಬಲ್ಲಿ 17-11-2017ರಂದು ಪತ್ತೆಯಾಗಿದ್ದ ಅಕ್ರಮ ಮರಳು ಸಾಗಾಟ ಪ್ರಕರಣದ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಎ.ಎಸ್.ಐ. ಶ್ರಿಧರ ರೈಯವರು ಕರ್ತವ್ಯದಲ್ಲಿ ರೌಂಡ್ಸ್ ಹೋಗುವ ಸಮಯ ವಾಹನ ಪತ್ತೆ ಹಚ್ಚಿ ವಾಹನದಲ್ಲಿದ್ದ ಮರಳನ್ನು ವಶಕ್ಕೆ ಪಡೆದು ರಾಧಾಕೃಷ್ಣ ಮತ್ತು ಹರೀಶ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಠಾಣಾ ಎಸ್‌ಐ ನಂದಕುಮಾರ್ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 4 ಜನರ ಸಾಕ್ಷಿ ವಿಚಾರಣೆಯ ನಂತರ ನ್ಯಾಯಾಲಯ ಪ್ರಾಸಿಕ್ಯೂಷನ್ ಅಪರಾಧ ರುಜುವಾತು ಪಡಿಸಲು ಸಾಧ್ಯವಾಗದ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪರವಾಗಿ ಉಪ್ಪಿನಂಗಡಿಯ ನ್ಯಾಯವಾದಿಗಳಾದ ಪ್ರಸಾದ್ ಕುಮಾರ್ ಮತ್ತು ಸುರಕ್ಷಿತ್ ಸಿ.ಎಚ್. ವಾದಿಸಿದ್ದರು.

LEAVE A REPLY

Please enter your comment!
Please enter your name here