ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ, ಕಡಲತಡಿಯ ಭಾರ್ಗವ ಶಿವರಾಮ ಕಾರಂತರ ಸೇರಿದಂತೆ ಮೊದಲಾದ ಹೆಸರಾಂತ ವ್ಯಕ್ತಿಗಳ ಕಾರುಚಾಲಕರಾಗಿ, ಮಂಗಳೂರಿನ ತಾಜ್ ಮಹಲ್ ಹೋಟೆಲ್ ಮಾಲಕರ ಅಚ್ಚುಮೆಚ್ಚಿನ ಚಾಲಕರಾಗಿ ದುಡಿದು, ಶತಾಯುಶಿ ಜೀವನ ನಡೆಸಿ, ಅ.5ರಂದು ಅಸ್ತಂಗತರಾದ ದಿ. ಕೊರಂಬಡ್ಕ ಮೋನಪ್ಪ ಗೌಡರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆಯು ಕನಕಮಜಲಿನ ಶ್ರೀ ಆತ್ಮಾರಾಮ ಸಭಾಭವನದಲ್ಲಿ ಅ.21ರಂದು ಜರುಗಿತು.
ನಿವೃತ್ತ ಶಿಕ್ಷಕ ಆನಂದ ಮಾಸ್ತರ್ ಅಕ್ಕಿಮಲೆ ಅವರು ದಿ. ಕೊರಂಬಡ್ಕ ಮೋನಪ್ಪ ಗೌಡರ ಶತಾಯುಶಿ ಜೀವನ ಹಾಗೂ ಅವರು ಸಲ್ಲಿಸಿದ ಕೊಡುಗೆಯ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೊರಂಬಡ್ಕ ಕುಟುಂಬಸ್ಥರು ಉಪಸ್ಥಿತರಿದ್ದರು.