ನಿಂತಿಕಲ್ಲು : ಸುಮುಖ ಅಸೋಸಿಯೇಟ್ಸ್ 3 ನೇ ವರ್ಷಕ್ಕೆ ಪಾದಾರ್ಪಣೆ

0

 

 

ನಿಂತಿಕಲ್ಲಿನ ಧರ್ಮಶ್ರೀ ಆರ್ಕಿಡ್ ನಲ್ಲಿ ಕಾರ್ಯಾಚರಿಸುತ್ತಿರುವ ಸಿವಿಲ್ ಎಂಜಿನಿಯರ್ ನಿಶಿಲ್ ಅಲೆಕ್ಕಾಡಿ ಅವರ ಮಾಲಕತ್ವದ ಸುಮುಖ ಅಸೋಸಿಯೇಟ್ಸ್ ಮೂರನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಆ ಪ್ರಯುಕ್ತ ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯ ರವರು ವೈದಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಮೇನೇಜರ್ ಸಂತೋಷ್ ಮರಕ್ಕಡ, ನಿಂತಿಕಲ್ಲು ಡಿಸಿಸಿ ಬ್ಯಾಂಕ್ ಸಿಬ್ಬಂದಿ ವರ್ಗ, ಮಾಲಕರ ತಾಯಿ ಶ್ರೀಮತಿ ವಾಣಿ ಚಂದ್ರಶೇಖರ ಅಲೆಕ್ಕಾಡಿ, ರಾಮಕೃಷ್ಣ ಪೂಜಾರಿ ಅಲೆಕ್ಕಾಡಿ, ನಿಂತಿಕಲ್ಲು ವೆಂಕಟ್ರಮಣ ಸೊಸೈಟಿ ಮ್ಯಾನೇಜರ್ ಚರಣ್ ಮತ್ತು ಸಿಬ್ಬಂದಿವರ್ಗ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here