ದ.ಕ.ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್ ವತಿಯಿಂದ ನಡೆಯುವ ಜಿಲ್ಲಾ ಚಾಂಪಿಯನ್ ಪಂದ್ಯಾಟಕ್ಕೆ ಸುಳ್ಯ ತಾಲೂಕಿನಿಂದ ಆಯ್ಕೆಯಾದ ಬಾಲಕ, ಬಾಲಕಿಯರ ತಂಡಗಳಿಗೆ ತಾಲೂಕು ವಾಲಿಬಾಲ್ ಎಸೋಸಿಯೇಶನ್ ವತಿಯಿಂದ ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಗ್ರೀನ್ ವ್ಸೂ ಶಾಲಾ ವಠಾದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅದ್ಯಕ್ಷ ದೊಡ್ಡಣ್ಣ ಬರಮೇಲು, ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್ ಉಪಾದ್ಯಕ್ಷ ಎಸ್.ಸಂಶುದ್ದೀನ್, ನ್ಯಾಷನಲ್ ವಾಲಿಬಾಲ್ ಚಾಂಪಿಯನ್ ಪಂದ್ಯಾಕೂಟದ ರೂವಾರಿ ಕೆ.ಎಂ ಮುಸ್ತಫಾ, ಅಸೋಸಿಯೇಷನ್ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಕೋಶಾಧಿಕಾರಿ ಕೆ.ಬಿ.ಇಬ್ರಾಹಿಂ, ಉಪಾದ್ಯಕ್ಷ ಅಬ್ದುಲ್ ರಜಾಕ್ (ರಜ್ಜು ಭಯ್ಯಾ) ತೀರ್ಪುಗಾರರ ಮುಖ್ಯಸ್ಥ ಕೊರಗಪ್ಪ ಮಾಸ್ಟರ್, ಅಸೊಶಿಯೇಶನ್ ನಿರ್ದೇಶಕರು ಟೀಶರ್ಟ್ ದಾನಿಗಳಾದ ಶಾಫಿ ಕುತ್ತಮೊಟ್ಟೆ, ಅಸೋಸಿಯೇಶನ್ ನಿರ್ದೇಶಕ ಇರ್ಫಾನ್ ಅಹಮದ್ ಜನತಾ.ಸುದರ್ಶನ್, ಬಶೀರ್ ಸಪ್ನಾ,ಶಹೀದ್ ಪಾರೆ, ಶಾರದಾ ಹೆಣ್ಮಕ್ಕಳ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ, ಗ್ರೀನ್ ವ್ಯೂ ಶಾಲೆ ಶಿಕ್ಷಕಿ ಪ್ರತಿಭಾ ಆಳ್ವ,ಪತ್ರಕರ್ತ ಅಸೋಸಿಯೇಷನ್ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಂಡದ ಮುಖ್ಯಸ್ಥರಾದ ಸುದರ್ಷನ್ ಹಾಗೂ ನಿತಿನ್ ರವರಿಗೆ ತಂಡದ ಜವಾಬ್ದಾರಿಯನ್ನು ವಹಿಸಿ ಕೊಡಲಾಯಿತು. ನಂತರ ಜಿಲ್ಲಾ ಮಟ್ಟದಲ್ಲಿ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರನ್ನು ಬಿಳ್ಕೊಡಲಾಯಿತು.