![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಮಂಗಳೂರು ಕೋಡಿಯಾಲ್ಬೈಲ್ನಲ್ಲಿರುವ ಬ್ರೈಟ್ವೇ ಇಂಡಿಯಾ ಕನ್ಸ್ಲ್ಟೆನ್ಸಿ ಆಂಡ್ ಅಲೈಡ್ ಸರ್ವೀಸ್ ಸಂಸ್ಥೆಯಲ್ಲಿ ಸುದ್ದಿ ಜನಾಂದೋಲನಕ್ಕೆ ಬೆಂಬಲ ಸೂಚಿಸಿ ಲಂಚ ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಬ್ಯಾನರ್ ಅಳವಡಿಸಲಾಯಿತು. ಸಂಸ್ಥೆಯ ಉದ್ಯೋಗಿಗಳು ಫಲಕ ಹಿಡಿದು ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉದ್ಯೋಗಿಗಳಾದ ಡಾ.ಹರ್ಷ ಕುಮಾರ್ ರೈ ಮಾಡಾವು, ಮನೀಷ್ ಕುಮಾರ್, ಅಕ್ಷಯ್ ಕುಮಾರ್, ಅನ್ವರುದ್ಧೀನ್, ಗಣೇಶ್ ರಾವ್, ಕಿರಣ್, ಲಾವಣ್ಯ ಲಕ್ಷ್ಮೀ, ಸೌಮ್ಯ, ಸುರೇಶ್ ಭಟ್ ಮತ್ತು ಕೌಶಿಕ್ ಉಪಸ್ಥಿತರಿದ್ದರು.