ಚೆಕ್ ಅಮಾನ್ಯ ಆರೋಪಿಗೆ ಶಿಕ್ಷೆ

0

ಪುತ್ತೂರು: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣದ ಆರೋಪಿ ವಿನೋದ್ ಎಂಬವರಿಗೆ ದಂಡ ವಿಧಿಸಿ ಪುತ್ತೂರಿನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಆರೋಪಿ ವಿನೋದ್ ಎಂಬವರಿಗೆ ವಕೀಲರ ಮೂಲಕ ನೋಟಿಸ್ ನೀಡಿದರೂ ಹಣ ಪಾವತಿಸದ ಕಾರಣ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯವರು ನ್ಯಾಯಾಲಯಕ್ಕೆ ಚೆಕ್ ಅಮಾನ್ಯಗೊಂಡ ಬಗ್ಗೆ ದೂರು ನೀಡಿದ್ದರು. ದೂರು ಅಂಗೀಕರಿಸಿದ ನ್ಯಾಯಾಲಯ ಆರೋಪಿಗೆ ಸಮನ್ಸ್ ನೀಡಿತ್ತು. ಆರೋಪಿಯು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೀಗ ಪ್ರಕರಣ ವಿಚಾರಣೆ ಪೂರ್ಣಗೊಳಿಸಿರುವ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆರೋಪಿ ತಪ್ಪಿತಸ್ಥ ಎಂದು ತೀರ್ಪು ನೀಡಿ ಆರೋಪಿಗೆ 6 ಲಕ್ಷ ರೂ.ದಂಡ, 3 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಫಿರ್‍ಯಾದಿಯ ಪರವಾಗಿ ವಕೀಲರಾದ ಜಗನ್ನಾಥ ರೈ, ಅಕ್ಷತಾ ಜೆ.ಕೆ., ವಿನಯ್ ಎಸ್.ಕೆ.,ಸ್ವಾತಿ ಜೆ.ರೈ ವಾದಿಸಿದ್ದರು.

LEAVE A REPLY

Please enter your comment!
Please enter your name here