ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವ್ಯವಹರಿಸುವ ದಸ್ತಾವೇಜು ಬರಹಗಾರರೇ, ವಕೀಲರೇ ಸಬ್‌ರಿಜಿಸ್ಟ್ರಾರ್ ಕಛೇರಿಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಲು ಕೈ ಜೋಡಿಸಿರಿ

0

ಸಬ್‌ರಿಜಿಸ್ಟ್ರಾರ್ ಕಛೇರಿ ಲಂಚ, ಭ್ರಷ್ಟಾಚಾರದ ತಾಣವಾಗಿದೆ, ಅದನ್ನು ಸುಧಾರಿಸಲು ಸಾಧ್ಯವೇ ಇಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ. ಆ ಪಿಡುಗನ್ನು ನಿವಾರಿಸಲು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಗುವ ಕೆಲಸಗಳು, ಅದಕ್ಕೆ ಬೇಕಾದ ದಾಖಲಾತಿಗಳು, ತಗಲುವ ವೆಚ್ಚ ಮತ್ತು ಸಮಯದ ಪಟ್ಟಿಯನ್ನು ಸಬ್‌ರಿಜಿಸ್ಟ್ರಾರ್ ಬಳಿಯಲ್ಲೇ ವಿಚಾರಿಸಿ ಅದರ ಮಾಹಿತಿಯನ್ನು ಜನರಿಗೆ ತಿಳಿಸುತ್ತಿದ್ದೇವೆ. ಅಲ್ಲಿ ನಡೆಯುವ ಲಂಚ, ಭ್ರಷ್ಟಾಚಾರದ ಪ್ರಮಾಣ ಮತ್ತು ಅದರ ಕಾರಣದ ಮಾಹಿತಿಯನ್ನು ತಿಳಿದಿರುವ ದಸ್ತಾವೇಜು ಬರಹಗಾರರು ಮತ್ತು ವಕೀಲರು ಮುಂದೆ ಬನ್ನಿ. ಸಬ್‌ರಿಜಿಸ್ಟ್ರಾರ್‌ರವರನ್ನು ಕರೆದು ಅಥವಾ ಭೇಟಿಯಾಗಿ ಅವರು ಲಂಚ, ಭ್ರಷ್ಟಾಚಾರ ಇಲ್ಲದೆ ಸೇವೆ ಮಾಡುವಂತೆ ತಾಕೀತು ಮಾಡೋಣ. ಉತ್ತಮ ಸೇವೆ ನೀಡುವಂತೆ ಮನವಿ ಮಾಡೋಣ. ಆ ಮೂಲಕ ಪುತ್ತೂರಿನ ಸಬ್‌ರಿಜಿಸ್ಟ್ರಾರ್ ಕಛೇರಿಯನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಿ ಜನರ ಕಣ್ಣೀರು ಒರೆಸಿ ಜನಸೇವೆ ಮತ್ತು ದೇಶ ಸೇವೆಗೆ ಕಾರಣರಾಗೋಣ.

ಈ ಮೇಲಿನ ವಿಷಯಕ್ಕೆ ಸಂಬಂಧಿಸಿ ಮಾಹಿತಿ ಮತ್ತು ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ನೀಡಬೇಕಾಗಿ ವಿನಂತಿ.

9620372389 ಇ-ಮೇಲ್ :[email protected]

LEAVE A REPLY

Please enter your comment!
Please enter your name here