![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕೊಕ್ಕಡ: ಈ ಹಿಂದೆ ಬನ್ನೂರು ಗ್ರಾಮದಲ್ಲಿ ಗ್ರಾಮಕರಣಿಕರಾಗಿದ್ದು, ಪ್ರಸ್ತುತ ಕೊಕ್ಕಡದಲ್ಲಿ ಗ್ರಾಮಕರಣಿಕರಾಗಿದ್ದ ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ ರೂಪೇಶ್(38ವ.) ಮೆದುಳಿನ ರಕ್ತಸ್ರಾವದಿಂದ ಮಾ.೨೭ರಂದು ಉಡುಪಿಯ ಆಸ್ಪತೆಯಲ್ಲಿ ನಿಧನರಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ನಡೆದ ನೇರ ನೇಮಕಾತಿಯಲ್ಲಿ ಇವರು ಬನ್ನೂರು ಗ್ರಾಮಕ್ಕೆ ಗ್ರಾಮಕರಣಿಕರಾಗಿ ನೇಮಕಗೊಂಡಿದ್ದರು. ನಂತರ ಬೆಂಗಳೂರಿಗೆ ವರ್ಗಾವಣೆಗೊಂಡು ಅಲ್ಲಿಂದ ಕೊಕ್ಕಡಕ್ಕೆ ವರ್ಗಾವಣೆಗೊಂಡಿದ್ದರು. ಪ್ರಸ್ತುತ ಅವರು ಕೊಕ್ಕಡ, ಶಿಶಿಲ, ಶಿಬಾಜೆ ಹಾಗೂ ಪಟ್ರಮೆ ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾ.18 ರಂದು ರಾತ್ರಿ ವೇಳೆ ಅಸ್ವಸ್ಥಗೊಂಡ ರೂಪೇಶ್ರವರನ್ನು ಕೂಡಲೇ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.