![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಮೈದಾನಿಮೂಲೆ ತರ್ಬೀಯತುಲ್ ಹುದಾ ಅಸೋಸಿಯೇಷನ್ ವತಿಯಿಂದ ಮೂರು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗಳನ್ನು ನಡೆಸಿ ಇದೀಗ ನಾಲ್ಕನೇ ವಾರ್ಷಿಕ ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಹಾಗೂ ರಮಳಾನ್ ಕಿಟ್ ವಿತರಣೆ ನಡೆಯಿತು.
ಮೈದಾನಿಮೂಲೆ ಮುಹ್ಯಿದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ದುಃಆ ನೇತೃತ್ವ ವಹಿಸಿದರು. ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಮತ್ತು ಏರ್ವಾಡಿ ಮಜ್ಲಿಸ್ಗೆ ಅಲ್ ಹಾಜ್ ಅಬೂನಜ ಉಸ್ತಾದ್ ಪರ್ಪುಂಜ ನೇತೃತ್ವ ನೀಡಿದರು. ವಾಗ್ಮಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಪ್ರಭಾಷಣ ನೆರವೇರಿಸಿ ರಮಳಾನ್ ತಿಂಗಳ ಆಗಮನವಾಗುತ್ತಿದೆ. ಯಾವಾಗಲೂ ಹೃದಯವನ್ನು ಸ್ವಚ್ಛವಾಗಿರಿಸಿ, ಎಲ್ಲರೊಂದಿಗೆ ಸೌಹರ್ದತೆಯಿಂದ ಮುನ್ನಡೆಯಿರಿ, ಯಾರಲ್ಲೂ ಧ್ವೇಷಿಸಬೇಡಿ ಎಂದು ಹೇಳಿದರು. ಈ ಸಮಯದಲ್ಲಿ ವರ್ಷಂಪ್ರತಿ ಆಚರಿಸುವ ರಮಳಾನ್ ಕಿಟ್ಟನ್ನು ಹಸ್ತಾಂತರಿಸಲಾಯಿತು. ಮುಹ್ಯಿದ್ದೀನ್ ಜುಮಾ ಮಸೀದಿ ಖತೀಬರಾದ ಅಬ್ದುಲ್ ರಝಾಖ್ ಅಲ್ ಖಾಸಿಮಿ ಕೂರ್ನಡ್ಕ, ಎಸ್.ಎಸ್.ಎಫ್. ಕ್ಯಾಂಪಸ್ ಪುತ್ತೂರು ಡಿವಿಷನ್ ಕಾರ್ಯದರ್ಶಿ ಹಾರಿಸ್ ಅಡ್ಕ, ಮುಹಮ್ಮದ್ ಮೈದಾನಿಮೂಲೆ, ನಾಸಿರ್ ಮೈದಾನಿಮೂಲೆ, ಇಬ್ರಾಹಿಂ ಕೆ.ಪಿ. ಮತ್ತು ಮೈದಾನಿಮೂಲೆ ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತರ್ಬೀಯತುಲ್ ಹುದಾ ಅಸೋಸಿಯೇಷನ್ ಅಧ್ಯಕ್ಷ ರಫೀಕ್ ಇಮ್ದಾದಿ ಅಲ್ ಬದವಿ ಸ್ವಾಗತಿಸಿ ನಿರೂಪಿಸಿದರು. ಅನ್ನದಾನ ನಡೆಯಿತು.