ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು ಇದರ 25 ನೇ ವರ್ಷಾಚರಣೆಯ ಸಂದರ್ಭದಲ್ಲಿ ನೂತನ ಲಾಂಛನ ಬಿಡುಗಡೆಯು ನಡೆಯಿತು. ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ನೂತನ ಲೋಗೋ ವನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ, ಕಾರ್ಯದರ್ಶಿ ವಿನಯ್ ಎಲುವೆ,ಉಪಾಧ್ಯಕ್ಷ ಜಯಂತ ಅಬೀರ,ಕೋಶಾಧಿಕಾರಿ ರಾಜೇಶ್ ಮೀಜೆ,ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಪೆರ್ಲೋಡಿ, ಲಕ್ಷ್ಮಣ ಗೌಡ ಮುಗರಂಜ,ಪರಮೇಶ್ವರ ಅನಿಲ,ಮಾಧವ ಕಟ್ಟತ್ತಾರು,ಗಣೇಶ್ ಪೆರ್ಲೋಡಿ, ರಚನ್ ಬರಮೇಲು, ಪುನೀತ್ ಕಲ್ಪಡ ಗೌರವ ಸಲಹೆಗಾರರಾದ ಪ್ರಶಾಂತ್ ಭಟ್ ಕಟ್ಟತ್ತಾರು, ಪದ್ಮಯ್ಯ ಗೌಡ ಅನಿಲ, ಪುಟ್ಟಣ್ಣ ಗೌಡ ಮುಗರಂಜ,ಪದ್ಮನಾಭ ಗೌಡ ಗುಂಡಿಗದ್ದೆ,ಬೆಳಿಯಪ್ಪ ಗೌಡ ಪೆರ್ಲೋಡಿ,ಜನಾರ್ದನ ಪೆರ್ಲೋಡಿ, ಯುವಕ ಮಂಡಲದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.