ಕಡಬ:ಅಕ್ರಮ ಮರಳು ಸಾಗಾಟದ ಟಿಪ್ಪರನ್ನು ವಶಕ್ಕೆ ಪಡೆದ ಗಣಿ ಇಲಾಖೆಯ ಅಧಿಕಾರಿಗಳು

0

ಕಡಬ:ಅಕ್ರಮ ಮರಳು ಸಾಗಾಟದ ಲಾರಿಯೊಂದನ್ನು ಗಣಿ ಇಲಾಖೆಯ ಅಧಿಕಾರಿಗಳು ಮಾ.28ರಂದು ಕುಟ್ರುಪ್ಪಾಡಿ ಗ್ರಾಮದ ಬಲ್ಯ ಸಮೀಪ ವಶಕ್ಕೆ ಪಡೆದಿದ್ದಾರೆ. ಬಲ್ಯದ ಕುದ್ರಡ್ಕ ಕ್ರಾಸ್ ಟಿಪ್ಪರನ್ನು ಗಣಿ ಇಲಾಖೆಯ ಸುಷ್ಮಾ ನೇತೃತ್ವದ ತಂಡ ವಶಕ್ಕೆ ಪಡೆದು ತಹಶೀಲ್ದಾರ್ ಸಮಾಕ್ಷಮದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪದವು ಕಡೆಯಿಂದ ಕಡಬದತ್ತ ಮರಳು ಸಾಗಾಟದ ಲಾರಿಯನ್ನು ತಡೆಯಲಾಗಿದ್ದು ವಿಚಾರಣೆ ವೇಳೆ ಯಾವುದೇ ಅನುಮತಿ ಇಲ್ಲದಿರುವುದನ್ನು ಮನಗಂಡು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ವಿವರ ಲಭಿಸಿಲ್ಲ.

LEAVE A REPLY

Please enter your comment!
Please enter your name here