ನೆಲ್ಯಾಡಿ: ಶೌರ್ಯ ಬಳಗದಿಂದ ಸೂರ್ಯನಗರ ಶ್ರೀ ರಾಮ ಶಾಲೆಯಲ್ಲಿ ಶ್ರಮದಾನ

0

ನೆಲ್ಯಾಡಿ: ಸೂರ್ಯನಗರ ಶ್ರೀ ರಾಮ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ವಲಯದ ಶೌರ್ಯ ಘಟಕದ ವತಿಯಿಂದ ಶಾಲೆಯ ಮೇಲ್ಚಾವಣಿ ದುರಸ್ತಿ ಕೆಲಸ ಹಾಗೂ ಶಾಲೆಯ ಸುತ್ತಮುತ್ತ ಸ್ವಚ್ಛತೆಯ ಶ್ರಮದಾನ ನಡೆಯಿತು.

ಬಳಿಕ ಘಟಕ ಪ್ರತಿನಿಧಿ ರಮೇಶ್ ಬಾಣಜಾಲು ಇವರ ಅಧ್ಯಕ್ಷತೆಯಲ್ಲಿ ಘಟಕದ ಮೇ ತಿಂಗಳ ಮಾಸಿಕ ಸಭೆ ನಡೆಯಿತು.


ಸಭೆಯಲ್ಲಿ ಮುಂದಿನ ತಿಂಗಳ ಶ್ರಮದಾನದ ಸ್ಥಳದ ಆಯ್ಕೆ ಸ್ವಯಂ ಸೇವಕರ ಭಾಗವಹಿಸುವಿಕೆ ಬಗ್ಗೆ,ಹಾಗೆಯೇ ತಿಂಗಳ ಮೂರನೇ ಗುರುವಾರದಂದು ಪ್ರತೀ ತಿಂಗಳ ಮಾಸಿಕ ಸಭೆ ಹಾಗು ಶ್ರಮದಾನ ಮಾಡುವುದೆಂದು ಸಭೆಯಲ್ಲಿ ಚರ್ಚಿಸಲಾಯಿತು.
ನೆಲ್ಯಾಡಿ ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್,ಸಂಯೋಜಕಿ ನಮಿತಾ ಶೆಟ್ಟಿ, ಘಟಕ ಪ್ರತಿನಿಧಿ ರಮೇಶ್ ಬಾಣಜಾಲು,ಸ್ವಯಂ ಸೇವಕರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here