ಕಾಣಿಯೂರು : ಕೆಳಗಿನಕೇರಿ ಕೊಪ್ಪ ಶ್ರೀ ಶಿರಾಡಿ ರಾಜನ್ ದೈವದ ನರ್ತನ ಸೇವೆ ಮತ್ತು ಬಲಿ ನೇಮೋತ್ಸವ ಮಾ ೨೯ ಮತ್ತು ೩೦ರಂದು ನಡೆಯಿತು. ಮಾ.೨೯ರಂದು ರಾತ್ರಿ ಕೊಪ್ಪ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಮ್ಮ ಟಿ.ವಿ ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ತಂಡದ ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ರಾಜನ್ ದೈವದ ಭಂಡಾರ ತೆಗೆದು, ಮಾ.೩೦ರಂದು ಬೆಳಿಗ್ಗೆ ಶ್ರೀ ಶಿರಾಡಿ ರಾಜನ್ ದೈವದ ನರ್ತನ ಸೇವೆ, ಬಲಿ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೊರಗಪ್ಪ ಕುಂಬಾರ ಗೌಡ ಮನೆ, ವೆಂಕಪ್ಪ ಕುಂಬಾರ ಬಾರಿಕಳ ಮನೆ, ವಸಂತ ಕುಂಬಾರ ಬುದ್ಧಿವಂತರು ಹಾಗೂ ಊರ, ಪರವೂರ ಭಕ್ತರು ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.