ಪುತ್ತೂರು: ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಸಾಪ್ತಾಹಿಕ ಕಾರ್ಯಕ್ರಮವಾಗಿ ರಾಮಾಯಣ ಸರಣಿಯಲ್ಲಿ “ವಿಭೀಷಣ ನೀತಿ” ಯಕ್ಷಗಾನ ತಾಳಮದ್ದಳೆಯು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರುಗಿತು.
ಭಾಗವತರಾಗಿ ಡಿ.ಕೆ ಆಚಾರ್ಯ ಆಲಂಕಾರು, ಹರೀಶ್ ಆಚಾರ್ಯ ಬಾರ್ಯ, ಶ್ರೀಪತಿ ಭಟ್ ಇಳಂತಿಲ ಮತ್ತು ಅರ್ಥದಾರಿಗಳಾಗಿ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಹರೀಶ್ ಬಾರ್ಯ(ರಾವಣ), ಗುಡ್ಡಪ್ಪ ಬಲ್ಯ (ವಿಭೀಷಣ), ಸಂಜೀವ ಪಾರೆಂಕಿ( ಇಂದ್ರಜಿತು ಮತ್ತು ಸುಗ್ರೀವ), ಪುಷ್ಪಲತಾ (ಕೈಕಸೆ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಭಾಗವಹಿಸಿದ್ದರು.