ಪುತ್ತೂರು: ಜಿಎಲ್ ಆಚಾರ್ಯ ವತಿಯಿಂದ ಸಂಟ್ಯಾರ್ ಜಂಕ್ಷನ್ ನಲ್ಲಿ ನೂತನವಾಗಿ ನಿರ್ಮಿಸಿದ ರಿಕ್ಷಾ ನಿಲ್ದಾಣದ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. ಈ ರಿಕ್ಷಾ ನಿಲ್ದಾಣದ ನಿರ್ವಹಣೆಯ ಹೊಣೆಯನ್ನು ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮತ್ತು ಕಲ್ಕೂರ ಅರ್ಡ್ವರ್ಟೈಸ್ ಮೆಂಟ್ ಸಂಸ್ಥೆಯವರು ಹೊತ್ತಿದ್ದಾರೆ. ಆರ್ಯಾಪು ಗ್ರಾಪಂ ಸದಸ್ಯ ಹರೀಶ್ ನಾಯಕ್ ವಾಗ್ಳೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಬಲರಾಮ ಆಚಾರ್ಯ, ಇಂಟರ್ ಲಾಕ್ ನೀಡಿದ ಕಾರ್ತಿಕೇಯ ಬ್ಲಾಕ್ಸ್ ನ ಮಾಲಕ, ಗ್ರಾಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ ರೈ, ಸದಸ್ಯರಾದ ಪವಿತ್ರಾ ರೈ ತೊಟ್ಲ, ಕಸ್ತೂರಿ ಕೃಷ್ಣಪ್ಪ ಪೂಜಾರಿ, ಗಿರೀಶ್ ಗೌಡ ಮರಿಕೆ, ಪವಿತ್ರ ರೈ, ಮಾಜಿ ಸದಸ್ಯ ಜಯಂತ್ ರೈ ಕಂಬಳತ್ತಡ್ಡ, ಗಣೇಶ್ ರೈ ಮೂಲೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಜಿಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬಿಜೆಪಿ ಬೂತ್ ಅಧ್ಯಕ್ಷ ಅಜಿತ್ ರೈ ತೊಟ್ಲ, ಉದ್ಯಮಿ ಸಂತೋಷ್ ರೈ ಕೈಕಾರ, ಶರತ್ ಕೂರೇಲು, ರಿಕ್ಷಾ ಚಾಲಕ ಮಾಲಕರು ಮೊದಲಾದವರು ಉಪಸ್ಥಿತರಿದ್ದರು.