![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಝಹ್ರಬತೂಲ್ ವುಮೆನ್ಸ್ ಕಾಲೇಜು ಸನದುದಾನ ಸಂಭ್ರಮದಲ್ಲಿದೆ.ಎ.2ರಂದು ಸಂಸ್ಥೆಯಲ್ಲಿ ‘ಅಝ್ಝಕಿಯ್ಯ’ ಸನದುದಾನ ಸಮ್ಮೇಳನ ನಡೆಯಲಿದ್ದು 20 ವಿದ್ಯಾರ್ಥಿನಿಯರು ಸನದು ಸ್ವೀಕರಿಸಲಿದ್ದಾರೆ. ಶರೀಯತ್ ವಿದ್ಯಾರ್ಥಿನಿಯರಿಗೆ ಖುರ್ ಆನ್, ತಫ್ಸೀರ್, ಫಿಕ್ಹ್(ಕರ್ಮ ಶಾಸ್ತ್ರ) ಅಖೀದ, ತಸವ್ವುಫ್( ಆಧ್ಯಾತ್ಮಿಕ ) ತಜ್ ವೀದ್, ತಾರೀಖ್ ( ಇಸ್ಲಾಮಿಕ್ ಚರಿತ್ರೆ ಅಧ್ಯಯನ) ಅದ್ಕಾರ್ ಮೊದಲಾದ ಅಧ್ಯಯನವನ್ನು ತರಗತಿಯಲ್ಲಿ ನೀಡಲಾಗುತ್ತಿದ್ದು ಇಂಗ್ಲೀಷ್, ಅರೇಬಿಕ್, ಕನ್ನಡ, ಉರ್ದು ಹಾಗೂ ಮಲಯಾಳಂ ಭಾಷೆಗಳಲ್ಲಿ ಅಧ್ಯಯನ ತರಗತಿಗಳು ನಡೆಯುತ್ತದೆ.
ಎಲ್ಲಾ ತರಗತಿಗಳು ಮಹಿಳಾ ಅಧ್ಯಾಪಕರಿಂದಲೇ ನಡೆಸಲಾಗುತ್ತಿದ್ದು ಎರಡು ವರ್ಷ ಪೂರೈಸಿದ ಶರೀಯತ್ ವಿದ್ಯಾರ್ಥಿನಿಯರಿಗೆ ಬಿರುದು ನೀಡಲಾಗುತ್ತದೆ.
ಅಲ್ಲದೇ ತಿಬ್ಬುನ್ನಬಿ ಕೋರ್ಸ್, ಟೀಚರ್ ಟ್ರೈನಿಂಗ್, ಹಿಝ್ಬ್ ಟ್ರೈನಿಂಗ್ ಕೋರ್ಸ್, ಹಿಜಾಮ ಥೆರಫಿ, ವ್ಯಕ್ತಿತ್ವ ವಿಕಸನ ತರಗತಿಗಳು, ಸೈಕಾಲಜಿ, ಹೋಂ ಸೈನ್ಸ್, ಟೈಲರಿಂಗ್, ಪ್ರಾಯೋಗಿಕ ಇಬಾದತ್, ತರಬೇತಿ ಹಾಗೂ ಕಂಪ್ಯೂಟರ್ ತರಗತಿಗಳನ್ನು ನೀಡಲಾಗುತ್ತದೆ. ಸ್ಕಾಲರ್ಶಿಪ್ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದ್ದು ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿನಿಯರ ಅನುಕೂಲಕ್ಕೆ ವಾಹನ ಸೌಕರ್ಯ ವ್ಯವಸ್ಥೆಯೂ ಇದೆ.
ಹೆಚ್ಚಿನ ಮಾಹಿತಿಗಾಗಿ: ಮೊ: 7760311272, 7483521719, 9108879552 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ತಿಳಿಸಿದ್ದಾರೆ.
ಸನದುದಾನ ಸಮ್ಮೇಳನ:
ಎ.2ರಂದು ಸಂಸ್ಥೆಯಲ್ಲಿ ಸನದುದಾನ ಸಮ್ಮೇಳನ ನಡೆಯಲಿದ್ದು ಅಸಯ್ಯದ್ ಅಲಿ ತಂಙಳ್ ಕುಂಬೋಲ್ ದುವಾ ಹಾಗೂ ಸನದುದಾನ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಝಹ್ರಬತೂಲ್ ವುಮೆನ್ಸ್ ಕಾಲೇಜಿನ ಅಧ್ಯಕ್ಷರಾಗಿರುವ ಡಾ. ಅಶ್ರಫ್ ಹಾಜಿ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಝಹ್ರಬತೂಲ್ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಅವರು ಮುಖ್ಯ ಭಾಷಣ ನಡೆಸಲಿದ್ದಾರೆ ಎಂದು ವಿದ್ಯಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.