ಆತೂರು: ‘ಕಾರ್ಣಿಕೊದ ದುಗಲಾಯೆ’ತುಳು ಭಕ್ತಿಗೀತೆ ಸಿ.ಡಿ.ಬಿಡುಗಡೆ

0

ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ದುಗಲಾಯಿ ದೈವದ ಕುರಿತು ರಂಗ್ ಉಬಾರ್ ಸಮರ್ಪಿಸಿದ ‘ಕಾರ್ಣಿಕೊದ ದುಗಲಾಯೆ’ ಎನ್ನುವ ತುಳು ಭಕ್ತಿ ಗೀತೆ ಸಿ.ಡಿ.ಯನ್ನು ಮಾ.29ರಂದು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ದೇವಳದ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿಯವರು ಬಿಡುಗಡೆಗೊಳಿಸಿದರು. ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಪ್ರಾರ್ಥಿಸಿದರು. ಸಾಹಿತ್ಯ ನೀಡಿದ ಹರೀಶ್ ಮಂಜೊಟ್ಟಿ, ನಿರ್ಮಾಪಕ ಪ್ರದೀಪ್ ಕೊಯಿಲ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಬುಡಲೂರು, ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮುರಳಿಕೃಷ್ಣ ಬಡಿಲ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ ಕೊನೆಮಜಲು, ಬಾಲಕೃಷ್ಣ ನಾಯ್ಕ ಏಣಿತ್ತಡ್ಕ, ಮುಖಂಡರಾದ ರಾಮಯ್ಯ ಗೌಡ ಬುಡಲೂರು, ರಾಮಚಂದ್ರ ನಾಯ್ಕ ಏಣಿತ್ತಡ್ಕ, ಹುಕ್ರಪ್ಪ ಗೌಡ ಪಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here