ಪುತ್ತೂರು: ನಿಡ್ಪಳ್ಳಿ ಗ್ರಾಮದ ದಿ. ಸಂಕಪ್ಪ ರೈ ನೆಲ್ಯಾಜೆಯವರ ಧರ್ಮಪತ್ನಿ ಶ್ರೀಮತಿ ದಾರಮ್ಮ ರೈ ಆನಾಜೆಯವರು ಏ. 5ರಂದು ನಿಧನರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಆನಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ತಿಮ್ಮಣ್ಣ ರೈ ಆನಾಜೆ, ಜಯರಾಮ ರೈ ಆನಾಜೆ, ಗಂಗಾಧರ ರೈ ಆನಾಜೆ, ಬಾಳಿಲ ವಿಶ್ವಾಸ್ ಸ್ಟೋರ್ಸ್ ನ ಮಾಲಕ ಸುದ್ದಿ ಏಜೆಂಟ್ ವಿಶ್ವನಾಥ ರೈ ಆನಾಜೆ, ಪುತ್ರಿಯರಾದ ಶ್ರೀಮತಿ ಲಲಿತಾ ಎಸ್. ರೈ ಉರುಂಬಿ ಹೊಸಮನೆ, ಪದ್ಮಾವತಿ ಬಿ. ರೈ ಪಡ್ರೆ, ಪಂಬೆತ್ತಡ್ಕ ಸೇರಿದಂತೆ ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.