ಕಯ್ಯಾರ ಕೇಶವ ಶಿಶುಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಕಯ್ಯಾರ ಜೋಡುಕಲ್ಲು ಇಲ್ಲಿಯ ಕೇಶವ ಶಿಶುಮಂದಿರದಲ್ಲಿ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ರವರು ಏರ್ಪಡಿಸಿದ್ದ ಮಹಿಳಾ ತಾಳಮದ್ದಳೆ ಸಪ್ತಾಹ ಅಂಗವಾಗಿ ಪಾರ್ತಿಸುಬ್ಬ ವಿರಚಿತ ” ಐರಾವತ ” ಯಕ್ಷಗಾನ ತಾಳಮದ್ದಳೆ ನಡೆಯಿತು.

 


ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ ( ಅರ್ಜುನ), ಕಿಶೋರಿ ದುಗ್ಗಪ್ಪ ( ದೇವೇಂದ್ರ ), ಶುಭಾಗಣೇಶ್ ( ಕುಂತಿ ), ಹರಿಣಾಕ್ಷೀ ಜೆ ಶೆಟ್ಟಿ ( ಧರ್ಮರಾಯ ), ಮನೋರಮಾ ಜಿ ಭಟ್ ( ನಾರದ ) ಸಹಕರಿಸಿದರು. ಚಂದ್ರಹಾಸ ಕಯ್ಯಾರು ಅವರು ಮಹಿಳಾ ಯಕ್ಷಗಾನ ಸಂಘ ಬೊಳುವಾರಿನ ಸಂಚಾಲಕ ಭಾಸ್ಕರ್ ಬಾರ್ಯರವನ್ನು ಗೌರವಿಸಿದರು.

LEAVE A REPLY

Please enter your comment!
Please enter your name here