ಪೆರ್ಲಂಪಾಡಿ-ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಕಲಿಕಾ ಚೇತರಿಕಾ ಬೇಸಿಗೆ ಶಿಬಿರ ಉದ್ಘಾಟನೆ

0

ಪೆರ್ಲಂಪಾಡಿ-ಕೊಳ್ತಿಗೆ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಮಕ್ಕಳಿಗೆ ಕಲಿಕಾ ಚೇತರಿಕಾ ಬೇಸಿಗೆ ಶಿಬಿರದ ಉದ್ಘಾಟನೆಯು ಪೆರ್ಲಂಪಾಡಿ  ಸ. ಹಿ. ಪ್ರಾ. ಶಾಲೆಯಲ್ಲಿ ಎ. 4ರಂದು ಜರಗಿತು. ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷ  ಶ್ಯಾಮಸುಂದರ ರೈ ಕೆರೆಮೂಲೆ ಶಿಬಿರವನ್ನು ಉದ್ಘಾಟಿಸಿದರು. ಕೊಳ್ತಿಗೆ-ಪೆರ್ಲಂಪಾಡಿ ಮ.ಸ.ಸೇ.ಸಂ. ಗ್ರಾಮ ಸಮಿತಿ ಅಧ್ಯಕ್ಷ ಎಸ್.  ಪದ್ಮನಾಭ ಸರಸ್ವತಿಮೂಲೆ ಅಧ್ಯಕ್ಷತೆ ವಹಿಸಿದ್ದರು.  ಕೊಳ್ತಿಗೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಮತ್ತು   ಹಾಗೂ ಕೊಳ್ತಿಗೆ ಗ್ರಾ.ಪಂ. ಸದಸ್ಯ ಪ್ರಮೋದ್ ಕೆ. ಎಸ್.  ಕೊಳ್ತಿಗೆ ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಕೆ.  ಪೆರ್ಲಂಪಾಡಿ ಸ.ಹಿ.ಪ್ರಾ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೊಕೇಶ್ ಪೆರ್ಲಂಪಾಡಿ, ಪೆರ್ಲಂಪಾಡಿ ಸ.ಹಿ.ಪ್ರಾ ಶಾಲಾ  ಮುಖ್ಯ ಶಿಕ್ಷಕ ಲಕ್ಷ್ಮಣ ನಾಯ್ಕ್ ಅತಿಥಿಗಳಾಗಿ ಭಾಗವಗಿಸಿದ್ದರು. ಶಿಬಿರವು ಎ. 8ರವರೆಗೆ ನಡೆಯಲಿದೆ. ಶಿಬಿರದಲ್ಲಿ ಕಸದಿಂದ ರಸ, ರಂಗ ತರಬೇತಿ, ನಾಯಕತ್ವ, ಡ್ರಾಯಿಂಗ್ ಮತ್ತು ಕ್ರಾಫ್ಟ್ ತರಬೇತಿಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here