ನೆಲ್ಯಾಡಿ : ಸ್ಟೆಪ್ ಯೋಜನೆ ಯಡಿ ಕೊಣಾಲು ಗ್ರಾಮದ ಆರ್ಲ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಂದಿನಿ ಹಾಗೂ ಅಮೃತ ಧಾರೆ ಸ್ವ ಸಹಾಯ ಸಂಘಗಳಿಗೆ ದ. ಕ ಹಾಲು ಒಕ್ಕೂಟ ಮಂಗಳೂರು ಇದರ ವತಿಯಿಂದ ಮಂಜೂರು ಗೊಂಡ 3 ಲಕ್ಷ ರೂಪಾಯಿಯನ್ನು ಸಂಘದ 10 ಮಂದಿ ಸದಸ್ಯರಿಗೆ ಬಡ್ಡಿ ರಹಿತ ಸಾಲವಾಗಿ ವಿತರಿಸಲಾಯಿತು.
ಚೆಕ್ ವಿತರಿಸಿದ ಸಂಘದ ಅಧ್ಯಕ್ಷೆ ಉಷಾ ಅಂಚನ್ ರವರು ಮಾತನಾಡಿ, ಮಹಿಳೆಯರು ದನ ಖರೀದಿ ಮಾಡಿ ಹೆಚ್ಚು ಹಾಲು ಹಾಕಿ ಸ್ವಾವಲಂಬನೆ ಬದುಕು ನಡೆಸುವಂತೆ ಹೇಳಿದರು. ಸ್ಟೆಪ್ ಯೋಜನೆಯ ಅಧಿಕಾರಿ ನಳಿನಿ ಶುಭ ಹಾರೈಸಿದರು. , ಸಂಘದ ನಿದೇರ್ಶಕರು, ಸದಸ್ಯರು ಉಪಸ್ಥಿತರಿದ್ದರು